ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಮಾನ ದುರಂತ : ಸಿಕ್ತು ಬ್ಲ್ಕಾಕ್ ಬಾಕ್ಸ್
ದುಬೈಯಿಂದ ಮಂಗಳೂರು ಬರುತ್ತಿದ್ದ ವಿಮಾನ ಇಳಿಯುವ ಸಮಯದಲ್ಲಿ ಅಪಘಾತಕ್ಕೆ ಈಡಾಗಿ 158 ಮಂದಿ ಸಾವನ್ನಪ್ಪಿದ್ದು, 8 ಜನ ಬದುಕುಳಿದಿರುವ ಘಟನೆ ಶನಿವಾರ ನಡೆದಿದೆ. ಅಪಘಾತಕ್ಕೆ ಈಡಾದ ವಿಮಾನ ತುಂಡು ತುಂಡು ಆಗಿದ್ದು, ಪ್ರಯಾಣಿಕರೆಲ್ಲಾ ಸುಟ್ಟು ಕರಕಲಾಗಿದ್ದಾರೆ. ಅವರ ದೇಹವನ್ನು ಗುರುತಿಸಲು ಸಾಧ್ಯವಾಗದಷ್ಟು ಮೃತದೇಹಗಳು ಸುಟ್ಟಿವೆ.
ಆದರೆ, ಅಪಘಾತಕ್ಕೆ ಸ್ಪಷ್ಟವಾಗಿ ಕಾರಣ ತಿಳಿದಿಲ್ಲ. ಪೈಲೆಟ್ ನ ನಿರ್ಲಕ್ಷ್ಯ ಎಂದು ಹೇಳುತ್ತಿದ್ದರೂ ಅದು ಅಧಿಕೃತವಾಗಿಲ್ಲ. ಹೀಗಾಗಿ ವಿಮಾನದಲ್ಲಿರುವ ಬ್ಲ್ಯಾಕ್ ಬಾಕ್ಸ್ ಹುಡುಕಾಟ ತೀವ್ರಗೊಂಡಿತ್ತು. ಇಂದು ಮಧ್ಯಾಹ್ನ ಬ್ಲ್ಯಾಕ್ ಬಾಕ್ಸ್ ದೊರೆಕಿದ್ದು, ಹೈದರಾಬಾದ್ ನ ಡಿಜಿಸಿಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಪಘಾತಕ್ಕೆ ಮುಂಚೆ ಎರ್ ಟ್ರಾಫಿಕ್ ಕಂಟ್ರೋಲ್ ಮತ್ತು ಪೈಲೆಟ್ ಮಧ್ಯೆ ನಡೆದ ಸಂಭಾಷಣೆ ರಿಕಾರ್ಡ್ ಆಗಿರುತ್ತದೆ. ಇದರ ತನಿಖೆ ನಡೆಸಿದರೆ, ಅಪಘಾತಕ್ಕೆ ಕಾರಣವೇನೆಂಬುದು ಸ್ಪಷ್ಟವಾಗಿ ತಿಳಿಯಲಿದೆ.
Comments
ಮಂಗಳೂರು ವಿಮಾನ ಅಪಘಾತ ಮಂಗಳೂರು ವಿಮಾನ ಅಪಘಾತ ಏರ್ ಇಂಡಿಯಾ ಸಾವು ರನ್ ವೇ ವಿಡಿಯೋ mangalore air crash air crash air india dubai airport runway overshot crew members accident
Story first published: Sunday, May 23, 2010, 15:12 [IST]