ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಮಾನ ದುರಂತ : ಮಂಗಳೂರಿಗೆ ತಜ್ಞರ ತಂಡ
ಶನಿವಾರ ನಡೆದ ವಿಮಾನ ದುರಂತದಲ್ಲಿ 158 ಮಂದಿ ಸಾವನ್ನಪ್ಪಿದ್ದು, 8 ಜನರು ಪವಾಡದ ರೀತಿಯಲ್ಲಿ ಬದುಕುಳಿದಿದ್ದಾರೆ. ಮೃತಪಟ್ಟವರಲ್ಲಿ 115 ಮೃತದೇಹಗಳನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. ಉಳಿದ 48 ದೇಹಗಳ ಗುರುತಿಗಾಗಿ ಡಿಎನ್ಎ ಪರೀಕ್ಷೆಯನ್ನು ವಿಧಿವಿಜ್ಞಾನ ತಜ್ಞರ ತಂಡ ಪ್ರಯೋಗ ಆರಂಭಿಸಿದೆ. ಮೃತದೇಹಗಳು ಸುಟ್ಟು ಕರಕಲಾಗಿದ್ದು, ಮಾಂಸದ ಮುದ್ದೆಗಳಾಗಿವೆ. ಗುರುತು ಹಿಡಿಯದಷ್ಟು ಸುಟ್ಟು ಹೋಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರು ತಿಳಿಸಿದ್ದಾರೆ. ದುರಂತ ಸ್ಥಳದಲ್ಲಿ ಬ್ಲ್ಯಾಕ್ ಬಾಕ್ಸ್ ಗಾಗಿ ಹುಡುಕಾಟ ಆರಂಭವಾಗಿದೆ ಎಂದು ಅವರು ವಿವರಿಸಿದರು,
ಮಂಗಳೂರಿನಲ್ಲಿ ನಡೆದ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ನಿರ್ಧರಿಸಿರುವ ಕೇಂದ್ರ ಸರಕಾರ, ಅಮೆರಿಕದ ತಜ್ಞರ ತಂಡವನ್ನು (US National Transportation Safety Board) ಕರೆಸಿಕೊಂಡಿದೆ.
Comments
ಮಂಗಳೂರು ವಿಮಾನ ಅಪಘಾತ ಮಂಗಳೂರು ವಿಮಾನ ಅಪಘಾತ ಏರ್ ಇಂಡಿಯಾ ಸಾವು ರನ್ ವೇ ವಿಡಿಯೋ mangalore air crash air crash air india dubai airport runway overshot crew members accident
Story first published: Sunday, May 23, 2010, 13:26 [IST]