ಬಜ್ಪೆಯಲ್ಲಿ ನರಕಸದೃಶ ವಾತಾವರಣ
ಮಂಗಳೂರು, ಮೇ 22 : ಬಜ್ಪೆ ವಿಮಾನ ನಿಲ್ದಾಣದಲ್ಲಿ ನರಕಸದೃಶ ವಾತಾವರಣ ಸೃಷ್ಟಿಯಾಗಿದೆ. ದುರಂತದಲ್ಲಿ ಮಡಿದವರೆಲ್ಲ ಗುರುತು ಹಿಡಿಯಲಾರದಷ್ಟು ಸುಟ್ಟು ಕರಕಲಾಗಿದ್ದಾರೆ. ಮಡಿದವರ ಕುಟುಂಬದವರ ರೋದನವನ್ನಂತೂ ಮುಗಿಲು ಮುಟ್ಟಿದೆ.
ರನ್ ವೇ ದಾಟಿ ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಬೆಂಕಿಗೆ ಸಿಕ್ಕ ಪತಂಗದಂತೆ ವಿಮಾನ ಸುಟ್ಟು ಭಸ್ಮವಾಗಿದೆ. ಅಪಘಾತ ಸ್ಥಳಕ್ಕೆ ಧಾವಿಸಿದ ಸಂಬಂಧಿಕರು ತಮ್ಮವರ್ಯಾರಾದರೂ ಬದುಕಿದ್ದಾರೆಯೇ ಎಂದು ಕಾದವರಿಗೆ ನಿರಾಶೆ ಕಾದಿತ್ತು. ಜವರಾಯ ಬಹುತೇಕ ಜನರನ್ನು ತನ್ನತ್ತ ಸೆಳೆದಿದ್ದ.
ಸತ್ತವರಲ್ಲಿ 50 ಜನ ಕಾಸರಗೋಡಿನವರು, 10 ಮಂಜೇಶ್ವರದವರು ಸೇರಿದ್ದಾರೆ. ಮಡಿದವರಲ್ಲಿ ಉಡುಪಿ, ಮಡಿಕೇರಿಯವರು ಕೂಡ ಸೇರಿದ್ದಾರೆ. 70 ಜನರನ್ನು ಮಾತ್ರ ಸುಟ್ಟು ಭಸ್ಮವಾದ ವಿಮಾನದಿಂದ ಹೊರತೆಗೆಯಲಾಗಿದೆ. ಇನ್ನೂ 50 ಜನ ವಿಮಾನದಲ್ಲಿ ಸಿಲುಕಿಕೊಂಡಿದ್ದಾರೆ. ಇವರನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಸತ್ತವರಲ್ಲಿ 105 ಜನ ಗಂಡಸರು, 32 ಹೆಂಗಸರು, 19 ಮಕ್ಕಳಲ್ಲಿ 4 ಜನ ಹಸುಗೂಸುಗಳೂ ಸೇರಿವೆ.
ಬದುಕುಳಿದವರು : ಈ ಭೀಕರ ದುರಂತದಲ್ಲಿ 6 ಜನ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಅವರನ್ನು ಎಜೆ ಆಸ್ಪತ್ರೆಗೆ ಸೇರಿಸಲಾಗಿದೆ. ಬದುಕುಳಿದವರನ್ನು ಗುರುತಿಸಲಾಗಿದ್ದು ಅವರ ಹೆಸರುಗಳು ಹೀಗಿವೆ : ಡಾ. ಸಬ್ರೀನಾ, ಮಹ್ಮದ್ ಕುಂಞ, ಪ್ರದೀಪ್, ಕಿಶೋರ್, ಉಮರ್ ಫಾರೂಕ್.
ಸಹಾಯವಾಣಿ ಸಂಖ್ಯೆ: 0824-2220 422, 011-25603101
*
ಬಜ್ಪೆಯಲ್ಲಿ
ನಕರಸದೃಶ
ವಾತಾವರಣ
*
ವಿಮಾನ
ಅಪಘಾತ;
ಮಳೆಯ
ನಡುವೆ
ರಕ್ಷಣಾ
ಕಾರ್ಯ
*
ಅಪಘಾತಕ್ಕೀಡಾದ
ವಿಮಾನ
ಪೈಲಟ್
ಝೆಡ್
ಗ್ಲೂಸಿಯಾ
ವಿಡಿಯೋ
*
ವಿಡಿಯೋ
:
ಬೆಂಕಿ
ಉಂಡೆಯಂತಾದ
ವಿಮಾನ
*
ವಿಡಿಯೋ
:
ಪುಟ್ಟ
ರನ್
ವೇ
ಜಿಗಿದ
ಏರ್
ಇಂಡಿಯಾ
ವಿಮಾನ
*
ವಿಡಿಯೋ
:
ದುರಂತಕ್ಕೆ
ಪೈಲಟ್
ತಪ್ಪು
ಕಾರಣ?
*
ವಿಡಿಯೋ
:
ಮಂಗಳೂರು
ವಿಮಾನ
ದುರಂತದಲ್ಲಿ
160
ಸಾವು