ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಗೆಂದು ಬಂದು ಮಸಣ ಸೇರಿದರು

By Prasad
|
Google Oneindia Kannada News

ಮಂಗಳೂರು, ಮೇ 22 : ಮದುವೆಗೆಂದು ದುಬೈನಿಂದ ಮಂಗಳೂರಿಗೆ ಬಂದಿದ್ದ ಒಂದು ಇಡೀ ಕುಟುಂಬ ದುರದೃಷ್ಟವಶಾತ್ ಮಸಣ ಸೇರಿದೆ. ಗಲ್ಫ್ ನ್ಯೂಸ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ, ಅವರ ಗಂಡ ಮತ್ತು ಮಗಳು ಮಂಗಳೂರು ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

ಗಲ್ಫ್ ನ್ಯೂಸ್ ನಲ್ಲಿ ಹಣಕಾಸು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಣಿರೇಖಾ ಪೂಂಜಾ, ಅವರ ಗಂಡ ಮತ್ತು 17 ವರ್ಷದ ಹರ್ಷಿಣಿ ಪೂಂಜಾ ಸಾವನ್ನಪ್ಪಿರುವ ದುರ್ದೈವಿಗಳು. ಹರ್ಷಿಣಿ ಅವರು ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿದ್ದರು. ಮಣಿರೇಖಾ ಅವರು ಸಂಬಂಧಿಯ ಮದುವೆಗೆಂದು ಮಂಗಳೂರಿಗೆ ಆಗಮಿಸಿದ್ದರು.

ದುರಂತ ಸಂಭವಿಸಿದ ಸುದ್ದಿ ತಿಳಿಯುತ್ತಿದ್ದಂತೆ ಮಣಿರೇಖಾ ಕುಟುಂಬದ ಇತರ ಸದಸ್ಯರು ಮಂಗಳೂರಿನ ಸಂಬಂಧಿಕರನ್ನು ಸಂಪರ್ಕಿಸಿದ್ದಾರೆ. ವಿಚಾರಣೆ ಮಾಡಲಾಗಿ ಬದುಕುಳಿದವರು ಹೆಸರಲ್ಲಿ ಮಣಿರೇಖಾ ಕುಟುಂಬದ ಹೆಸರು ಇರಲಿಲ್ಲ ಎಂದು ದುಃಖತಪ್ತ ಸಂಬಂಧಿಯೊಬ್ಬರು ಹೇಳಿದ್ದಾರೆ.

ಸಹಾಯವಾಣಿ ಸಂಖ್ಯೆ: 0824-2220 422, 011-25603101

* ಮಂಗಳೂರಿನಲ್ಲಿ ಭೀಕರ ವಿಮಾನ ಅಪಘಾತ
* ಬಜ್ಪೆಯಲ್ಲಿ ನಕರಸದೃಶ ವಾತಾವರಣ
* ವಿಮಾನ ಅಪಘಾತ; ಮಳೆಯ ನಡುವೆ ರಕ್ಷಣಾ ಕಾರ್ಯ
* ಅಪಘಾತಕ್ಕೀಡಾದ ವಿಮಾನ ಪೈಲಟ್ ಝೆಡ್ ಗ್ಲೂಸಿಯಾ
* ಮಂಗಳೂರು ವಿಮಾನ ದುರಂತಕ್ಕೆ ಕಾರಣವೇನು?

ವಿಡಿಯೋ
* ವಿಡಿಯೋ : ಬೆಂಕಿ ಉಂಡೆಯಂತಾದ ವಿಮಾನ
* ವಿಡಿಯೋ : ಪುಟ್ಟ ರನ್ ವೇ ಜಿಗಿದ ಏರ್ ಇಂಡಿಯಾ ವಿಮಾನ
* ವಿಡಿಯೋ : ದುರಂತಕ್ಕೆ ಪೈಲಟ್ ತಪ್ಪು ಕಾರಣ?
* ವಿಡಿಯೋ : ಮಂಗಳೂರು ವಿಮಾನ ದುರಂತದಲ್ಲಿ 160 ಸಾವು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X