ಇನ್ಫಿ ಸುಧಾಮೂರ್ತಿಗೆ ಬಸವ ಶ್ರೀ ಪ್ರಶಸ್ತಿ
2010 ನೇ ಸಾಲಿನ ಪ್ರತಿಷ್ಠಿತ ಬಸವ ಶ್ರೀ ಪ್ರಶಸ್ತಿಯನ್ನು ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ ಸುಧಾಮೂರ್ತಿ ಅವರಿಗೆ ನೀಡಲಾಗುವುದು. ವಚನ ಶ್ರೀ ಪ್ರಶಸ್ತಿಯನ್ನು ವಿದ್ವಾಂಸ ಹಿರಿಯ ಸಾಹಿತಿ ಪ್ರೊ.ಜಿ.ಎಸ್. ಸಿದ್ದಲಿಂಗಯ್ಯ ಅವರಿಗೆ ನೀಡಲಾಗುವುದು ಎಂದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ.23 ರಂದು ಬೆಳಿಗ್ಗೆ 10.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕೋಡಿಮಠ ಸಂಸ್ಥಾಕ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿ ಬಸವ ಶ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ವಿಧಾನ
ಪರಿಷತ್
ಸಭಾಪತಿ
ವೀರಣ್ಣ
ಮತ್ತಿಕಟ್ಟಿ,
ಅಧ್ಯಕ್ಷತೆ
ವಹಿಸಲಿದ್ದು,
ವಚನ
ಸಾಹಿತ್ಯ
ಶ್ರೀ
ಪ್ರಶಸ್ತಿಯನ್ನು
ಸಾರಿಗೆ
ಸಚಿವ
ಆರ್.ಅಶೋಕ್
ಪ್ರದಾನ
ಮಾಡಲಿದ್ದಾರೆ.
ಪ್ರಶಸ್ತಿ
ಪುರಸ್ಕೃತರ
ಬಗ್ಗೆ
ವಿಶೇಷ
ಸಂಚಿಕೆಯನ್ನು
ರಂಗತಜ್ಞೆ
ಮತ್ತು
ರಾಜ್ಯಸಭಾ
ಸದಸ್ಯೆ
ಬಿ.ಜಯಶ್ರೀ,
ಮುಖ್ಯ
ಅತಿಥಿಗಳಾಗಿ
ಜಲಸಂಪನ್ಮೂಲ
ಸಚಿವ
ಬಸವರಾಜ
ಎಸ್.ಬೊಮ್ಮಾಯಿ,
ಮಾಜಿ
ಸಚಿವ
ವಿ.ಸೋಮಣ್ಣ
ಅವರು
ಭಾಗವಹಿಸಲಿದ್ದಾರೆ
ಎಂದು
ತಿಳಿಸಿದರು.