ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಂತಿ ಕದಡುವ ಸಂಘಗಳಿಗೆ ಉಗ್ರಶಿಕ್ಷೆ: ನಖ್ವಿ

By Mahesh
|
Google Oneindia Kannada News

Mukhtar Abbas Naqvi
ನವದೆಹಲಿ, ಮೇ.14: ದೇಶದ ಶಾಂತಿ ಹಾಗೂ ಐಕ್ಯತೆಗೆ ಭಂಗ ತರುವ ಸಂಘಟನೆಗಳು ಹಿಂದು ಅಥವಾ ಮುಸ್ಲಿಂಗೆ ಸೇರಿದ್ದು ಎಂದು ಪ್ರತ್ಯೇಕಿಸದೇ, ಏಕ ರೂಪದ ಉಗ್ರ ಶಿಕ್ಷೆ ನೀಡಬೇಕು ಎಂದು ಶ್ರೀರಾಮಸೇನೆ ದುಡ್ಡಿಗಾಗಿ ಗಲಭೆ ಪ್ರಕರಣ ಬೆಳಕಿಗೆ ಬಂದ ನಂತರ ಬಿಜೆಪಿ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ಪ್ರತಿಕ್ರಿಯಿಸಿದ್ದಾರೆ.

ಮತೀಯ ಸಂಘರ್ಷ ಹುಟ್ಟು ಹಾಕುವವರಲ್ಲಿ ಹಿಂದು ಅಥವಾ ಮುಸ್ಲಿಂ ಭಯೋತ್ಪಾದಕರು ಎಂದು ವಿಂಗಡಿಸಿ ನೋಡುವ ಅಗತ್ಯವಿಲ್ಲ. ದೇಶದ ಏಕತೆಗೆ ಭಂಗ ತರುವ ಯಾವುದೇ ಸಂಘಟನೆ ಯಾದರೂ ಅವರಿಗೆ ಉಗ್ರ ಶಿಕ್ಷೆ ನೀಡಲೇಬೇಕು. ಶ್ರೀ ರಾಮ ಸೇನೆ ವಿರುದ್ಧ ಈಗಾಗಲೇ ಸಾಕಷ್ಟ್ಟು ಪ್ರಕರಣಗಳಿವೆ ಆದರೆ,ನ್ಯಾಯಾಲಯದಲ್ಲಿ ಯಾವುದು ಸಾಬೀತಾಗಿಲ್ಲ. ಈ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಸೂಕ್ತ ಕ್ರಮ ಕೈಗೊಳ್ಳುವರು ಎಂಬ ನಂಬಿಕೆಯಿದೆ ಎಂದು ನಖ್ವಿ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X