ಮಹಾಜನತೆಗೆ ರೆಡ್ಡಿ ಬರೆದ ಶ್ವೇತಪತ್ರ
* ಜಿ. ಜನಾರ್ದನ ರೆಡ್ಡಿ, ಬೆಂಗಳೂರು
ನನ್ನ ಆತ್ಮೀಯ ಸಮಸ್ತ ಪತ್ರಕರ್ತ ಮಿತ್ರರೇ,
ಕಳೆದ ಕೆಲವು ದಿನಗಳಿಂದ ನಾನು ತಮ್ಮ ಎದುರಿಗೆ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬರದೆ ಇರುವುದಕ್ಕೆ ಸಾಕಷ್ಟು ಕಾರಣಗಳು ಇವೆ. ದೊಡ್ಡವರು ಹೇಳುವ ಹಾಗೆ ತಾಳಿದವನು ಬಾಳಿಯಾನು ಎಂಬಂತೆ ಸತ್ಯ, ನಿಷ್ಠೆ, ಪ್ರಾಮಾಣಿಕತೆಯಲ್ಲಿ ವಿಶ್ವಾಸ ಇಟ್ಟವರು ನಾವು. ಸತ್ಯಕ್ಕೆ ಕೊನೆಗಾದರೂ ಜಯ ಲಭಿಸುತ್ತದೆ ಎಂಬ ಮಹಾತ್ಮಾಗಾಂಧಿಜೀಯವರ ತತ್ವ ಸಿದ್ದಾಂತಗಳನ್ನು ನಂಬಿದವರು ನಾವು.
ಕಳೆದ ಹಲವಾರು ತಿಂಗಳಿನಿಂದ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಇಡೀ ದೇಶದಲ್ಲಿ ನನ್ನನ್ನು ಮತ್ತು ನನ್ನ ಕುಟುಂಬ ಸದಸ್ಯರನ್ನು ಖಳ ನಾಯಕರ ರೀತಿಯಲ್ಲಿ ಬಿಂಬಿಸಿದ ಮಹಾನ್ ನಾಯಕರೆಂದು ಕರೆಸಿಕೊಳ್ಳುವ ವಿವಿಧ ಪಕ್ಷದ ನಾಯಕರು, ಮಹಾನ್ ಪಂಡಿತರೆಂದು ತಮ್ಮಷ್ಟಕ್ಕೆ ತಾವೇ ತಿಳಿದುಕೊಂಡಿರುವ ಬುದ್ಧಿಜೀವಿಗಳಿಗೆ ಈಗಲಾದರೂ ಜ್ಞಾನೋದಯವಾಗಲಿದೆ ಎಂದು ನಂಬಿದ್ದೇನೆ.
ನನಗೆ ಅತ್ಯಂತ ಕಳವಳಕಾರಿ ಮತ್ತು ದುಃಖದ ಸಂಗತಿ ಏನೆಂದರೆ ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳ ಮುಖಾಂತರ ತಪ್ಪು ಮಾಹಿತಿಯಿಂದ ಇಡೀ ದೇಶದ ಜನರನ್ನೇ ದಾರಿ ತಪ್ಪಿಸಲು ಕಾರಣೀಭೂತರಾದ ಮಹಾನ್ ನಾಯಕರುಗಳು, ಕೆಲವು ಬುದ್ದಿಜೀವಿಗಳಿಗೆ, ಮೊನ್ನೆ ಪ್ರಕಟವಾದ ಈ ತೀರ್ಪಿನಿಂದಾದರೂ ಜ್ಞಾನೋದಯವಾಗಲಿ. ಭವಿಷ್ಯದಲ್ಲಿ ಈ ರೀತಿ ನನ್ನ ಹಾಗೇ ಇನ್ನೊಬ್ಬ ವ್ಯಕ್ತಿಗೆ ಆಗದೇ ಇರಲಿ. ಭಗವಂತ ಇವರೆಲ್ಲರಿಗೂ ಸದ್ಬುದ್ಧಿಯನ್ನು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಮುಂದೆ ಓದಿ : ನಾವು ಸುಲಿಗೆಕೋರರಾ? ದರೋಡೆಕೋರರಾ?