ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತ.ನಾಡು ದೇಗುಲಕ್ಕೆ ಅನುದಾನ ಕರವೇ ಕಿಡಿ
ನಮ್ಮ ರಾಜ್ಯದ ನೂರಾರು ದೇಗುಲಗಳು, ಗುಡಿ ಗೋಪುರಗಳು ಪಾಳುಬಿದ್ದಿದೆ, ಸುಣ್ಣಬಣ್ಣ ಬಳಿದು ವರ್ಷಗಳೇ ಕಳೆದಿವೆ. ಸಂಬಂಧಪಟ್ಟ ಇಲಾಖೆಗೆ ಸೂಕ್ತ ಸಚಿವರೇ ನೇಮಕವಾಗಿಲ್ಲ, ಪುರಕ್ಕೆ ಹಿತವನ್ನು ಬಯಸುವ ಪುರೋಹಿತ, ಅರ್ಚಕರ ಪಾಡು ಹೇಳತೀರದು ಪರಿಸ್ಥಿತಿ ಹೀಗಿರುವಾಗ, ಯಡಿಯೂರಪ್ಪ ಅವರು ತಮಿಳುನಾಡಿನ ದೇಗುಲಗಳ ಉದ್ಧಾರಕ್ಕೆ ಭಾರಿ ಹಣ ನೀಡಿರುವುದು ಖಂಡನಾರ್ಹ ಎಂದು ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು.
ಮುಜರಾಯಿ ಇಲಾಖೆಯ ಗಣತಿಯಂತೆ ಸುಮಾರು 24 ಸಾವಿರ ದೇಗುಲಗಳನ್ನು ಗುರುತಿಸಲಾಗಿದೆ. ಇದರಲ್ಲಿ ಸುಮಾರು 18 ಸಾವಿರ ದೇಗುಲಗಳಿಗೆ ಅರ್ಚಕರಿಲ್ಲ. ಇದರ ಬಗ್ಗೆ ಗಮನ ಹರಿಸದೆ, ರಾಜ್ಯದ ಅಭಿವೃದ್ಧಿಗೆ ಸದಾ ಕಂಟಕಪ್ರಾಯವಾದ ತಮಿಳುನಾಡಿನ ಅಭಿವೃದ್ಧಿಗೆ ಸಿಎಂ ಮುಂದಾಗಿರುವುದು ಹೀನ ಕೃತ್ಯ ಎಂದು ಪ್ರವೀಣ್ ಗುಡುಗಿದರು. ಮೇ ಮೊದಲವಾರದಲ್ಲಿ ತಮಿಳುನಾಡಿನ ಕಡಲೂರಿನ ದೇಗುಲಕ್ಕೆ ಸಿಎಂ ಪರಿವಾರ ತೆರಳಿತ್ತು. ಅಲ್ಲಿಂದ ಬಂದ ಕೂಡಲೇ ಅನುದಾನವನ್ನು ಘೋಷಿಸಿದ ಯಡಿಯೂರಪ್ಪ, ಈ ಬಗ್ಗೆ ಅರ್ಥಿಕ ಇಲಾಖೆಗೆ ಸೂಚನೆ ನೀಡಿದ್ದರು.
ಮುಜರಾಯಿ ಇಲಾಖೆ ಯಡಿಯೂರಪ್ಪ ಕರವೇ ಅರ್ಚಕ ಅನುದಾನ ತಮಿಳುನಾಡು ದೇವಸ್ಥಾನ ದಾವಣಗೆರೆ ಜಿಲ್ಲಾಸುದ್ದಿ muzrai department davanagere priests
Story first published: Tuesday, May 11, 2010, 17:38 [IST]