ಬಳ್ಳಾರಿ ಗಣಿ ಒತ್ತುವರಿ ಭೂಭಾಗದ ಲೆಕ್ಕ
ಓಬಳಾಪುರಂ
ಮೈನಿಂಗ್
ಕಾರ್ಪೊರೇಷನ್
-
25.92
ಹೆಕ್ಟೇರ್
ಓಬಳಾಪುರಂ
ಮೈನಿಂಗ್
ಕಾರ್ಪೊರೇಷನ್
2
-
38.98
ಹೆಕ್ಟೇರ್
ಅಂತರಗಂಗಮ್ಮ
ಮೈನಿಂಗ್
ಕಾರ್ಪೊರೇಷನ್-3
-
68.50
ಹೆಕ್ಟೇರ್
(ಎಜಿಕೆ)
ಬಳ್ಳಾರಿ
ಐರನ್
ಓರ್ಸ್
ಪ್ರೈವೇಟ್
ಲಿಮಿಟೆಡ್
-
27.12
ಹೆಕ್ಟೇರ್
ಅನಂತಪುರಂ
ಮೈನಿಂಗ್
ಕಾರ್ಪೊರೇಷನ್
-
6.5
ಹೆಕ್ಟೇರ್
ವೈ.
ಮಹಾಬಲೇಶ್ವರಪ್ಪ
ಅಂಡ್
ಸನ್ಸ್
-
25
ಹೆಕ್ಟೇರ್
ಕರ್ನಾಟಕದ ಪಶ್ಚಿಮಕ್ಕೆ 100-150 ಮೀಟರ್ ಅಗಲ, 6 ಕಿಮೀ ಉದ್ದ ಒತ್ತುವರಿ ಆಗಿದ್ದನ್ನು ಸರ್ವೇ ಆಫ್ ಇಂಡಿಯಾ ಮೊದಲ ಸುತ್ತಿನ ವರದಿಯಲ್ಲಿ ದಾಖಲಿಸಿತ್ತು. ಎರಡನೇ ವರದಿಯಲ್ಲಿ ಕರ್ನಾಟಕ - ಆಂಧ್ರದ ಗಡಿರೇಖೆಯನ್ನು ಸ್ಪಷ್ಟವಾಗಿ ನಮೂದು ಮಾಡಬೇಕು ಎಂದು ವರದಿ ಮಾಡಿತ್ತು.
ಗಣಿ ಒತ್ತುವರಿ ಕುರಿತು ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್ ಮತ್ತು ಬಳ್ಳಾರಿ ಐರನ್ ಓರ್ಸ್ ಪ್ರೈವೇಟ್ ಲಿಮಿಟೆಡ್ ಮಧ್ಯೆ ವಿವಾದ ಇತ್ತು. ಮತ್ತು ಈ ವಿವಾದದಿಂದಾಗಿ ಈ ಪ್ರದೇಶದ 10 ಹೆಕ್ಟೇರ್ ಪ್ರದೇಶದಲ್ಲಿ ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಬಹಿರಂಗ ಆಗಿತ್ತು. ಆದರೆ, ಸುಪ್ರೀಂಕೋರ್ಟ್ನಲ್ಲಿ ಈ ವಿವಾದ ಪ್ರಸ್ತುತ ಚರ್ಚೆಗೆ ಬರುತ್ತಿಲ್ಲ ಎನ್ನಲಾಗುತ್ತಿದೆ.
ಅಂತರಗಂಗಮ್ಮ ಮೈನಿಂಗ್ ಕಾರ್ಪೊರೇಷನ್ನಿಂದ ಗಡಿ ಭಾಗದಲ್ಲಿ ಕರ್ನಾಟಕದ ಪ್ರದೇಶದಲ್ಲಿ 100-150 ಮೀಟರ್ ಅಗಲ, 6 ಕಿಮೀ ಉದ್ದಕ್ಕೆ ಒತ್ತುವರಿ ಆಗಿತ್ತು ಎಂದು ಸಾಬೀತಾಗಿದೆ. ಆದರೆ, ಸೋಮವಾರ ಕರ್ನಾಟಕ - ಆಂಧ್ರದ ಗಡಿ ಭಾಗದ ವಿವಾದಿತ ಪ್ರದೇಶದಲ್ಲಿ ಓಎಂಸಿ ಮತ್ತೆ ಗಣಿಗಾರಿಕೆ ಮುಂದುವರೆಸಬಹುದು ಎಂದು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶ ಕೆಜಿ ಬಾಲಕೃಷ್ಣನ್ ಆದೇಶ ಹೊರಡಿಸಿರುವುದು ರೆಡ್ಡಿ ಸೋದರರಿಗೆ ಸಹಜವಾಗಿ ಹರ್ಷ ತಂದಿದೆ.