ತೈಲ ಬೆಲೆ ಏರಿಕೆ : ಮೇ 21ರಂದು ಉನ್ನತ ಸಭೆ
ಈ ಸಮಿತಿಯಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ, ಕೃಷಿ ಸಚಿವ ಶರದ್ ಪವಾರ್, ರಸಗೊಬ್ಬರ ಸಚಿವ ಎಮ್ ಕೆ ಅಳಗಿರಿ, ರೇಲ್ವೇ ಸಚಿವೆ ಮಮತಾ ಬ್ಯಾನರ್ಜಿ, ರಸ್ತೆ ಸಾರಿಗೆ ಸಚಿವ ಕಮಲ್ ನಾಥ್ ಮತ್ತು ಯೋಜನಾ ಆಯೋಗದ ಉಪಾದ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಇದ್ದಾರೆ. ಇವರಲ್ಲಿ ಒಬ್ಬರು ಗೈರುಹಾಜರಾದರೂ ಸಭೆ ಮುಂದೂಡಲಾಗುತ್ತದೆ.
ಈ ಸಭೆಯಲ್ಲಿ ಅಸಲಿಗಿಂತ ಕಡಿಮೆ ಬೆಲೆಗೆ ತೈಲ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದರಿಂದ ಆಗುತ್ತಿರುವ ನಷ್ಟ ಭರ್ತಿ ಮಾಡಲು ಬೆಲೆ ಹೆಚ್ಚಳ ಮತ್ತು ನಿಯಂತ್ರಣ ರದ್ದತಿ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾದ್ಯತೆ ಇದೆ. ಬೆಲೆ ನಿಯಂತ್ರಣ ರದ್ದುಗೊಳಿಸಿದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತೀ ಲೀಟರಿಗೆ ಕನಿಷ್ಠ 6 ರುಪಾಯಿ ಹೆಚ್ಚಳ ಆಗಲಿದೆ.
ಪ್ರಸ್ತುತ ಅಸಲಿಗಿಂತ ಕಡಿಮೆ ಬೆಲೆಗೆ ತೈಲ ಮಾರಾಟದಿಂದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದುಸ್ಥಾನ್ ಪೆಟ್ರೋಲಿಯಂ ಸಂಸ್ಥೆಗಳಿಗೆ ಪ್ರತಿ ನಿತ್ಯ 275 ಕೋಟಿ ರುಪಾಯಿಗಳಿಗೂ ಅಧಿಕ ನಷ್ಟ ಆಗುತಿದ್ದು ಈ ವಾಷಾಂತ್ಯದ ವೇಳೆಗೆ ನಷ್ಟ 90 ಸಾವಿರ ಕೋಟಿ ರುಪಾಯಿಗಳನ್ನು ಮೀರಲಿದೆ ಎಂದು ಅಂದಾಜಿಸಲಾಗಿದೆ.