ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಯಾಧೀಶ ತೆಹಲಿಯಾನಿ ಅವರಿಗೆ ಬಡ್ತಿ

By Mrutyunjaya Kalmat
|
Google Oneindia Kannada News

Ajmal Amir Kasab
ಮುಂಬೈ, ಮೇ. 9 : ಮುಂಬೈ ದಾಳಿಯ(26/11) ವಿಚಾರಣೆ ನಡೆಸಿ ಪಾತಕಿ ಪಾಕಿಸ್ತಾನದ ಅಜ್ಮಲ್ ಅಮೀರ್ ಕಸಬ್ ಗ ಗಲ್ಲು ಶಿಕ್ಷೆ ತೀರ್ಪ ಪ್ರಕಟಿಸಿರುವ ಮುಂಬೈ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮದನ್ ಲಕ್ಷ್ಮಣ ತೆಹಲಿಯಾನಿ ಅವರು ಸಿವಿಲ್ ಮತ್ತು ಸೆಷನ್ ನ್ಯಾಯಾಲಯದ ಪ್ರದಾನ ನ್ಯಾಯಾಧೀಶರಾಗಿ ಪದೋನ್ನತಿ ಪಡೆದುಕೊಂಡಿದ್ದಾರೆ.

ಕಸಬ್ ಗೆ ಗಲ್ಲು ಶಿಕ್ಷೆಯ ತೀರ್ಪು ಪ್ರಕಟಿಸಿ ಮರುದಿನ ಅಂದರೆ ಶುಕ್ರವಾರ ತೆಹಲಿಯಾನಿ ಸೆಷನ್ ನ್ಯಾಯಾಲಯದ ಪ್ರದಾನ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ತೆಹಲಿಯಾನಿ ಅವರು ಹೆಚ್ಚುವರಿ ನ್ಯಾಯಾಧೀಶರಾಗಿ ಉಗ್ರರ ದಾಳಿಯ ವಿಚಾರಣೆ ನಡೆಸಿದ್ದರು. 46ರ ಹರೆಯದ ತೆಹಲಿಯಾನಿ ಮೂಲತಃ ರಾಜಸ್ತಾನದವರು. ಕಳೆದ ಹಲವಾರು ವರ್ಷಗಳಿಂದ ಅವರ ಕುಟುಂಬ ನಾಗಪುರ್ ದಲ್ಲಿ ನೆಲೆಸಿದೆ. ತೆಹಲಿಯಾನಿ ನಾಗಪುರ್ ದಲ್ಲಿ ಮೆಟ್ರಿಕ್ಯೂಲೇಷನ್, ಕಾನೂನು ಪದವಿಯನ್ನು ಮುಗಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X