ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಿಂತ ಲಾರಿಗೆ ಟೆಂಪೋ ಡಿಕ್ಕಿ : ನಾಲ್ವರ ಸಾವು
ನಿಂತಿದ್ದ ಲಾರಿಗೆ ಜನ ತುಂಬಿದ್ದ ಟೆಂಪೋ ಡಿಕ್ಕಿ ಹೊಡೆದಿದೆ. ಟೆಂಪೋ ಹೈದರಾಬಾದಿನಿಂದ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಹಾವಿನಾಳ ಗ್ರಾಮಕ್ಕೆ ತೆರಳುತ್ತಿತ್ತು. ವೇಗವಾಗಿ ಬರುತ್ತಿದ್ದ ಟೆಂಪೋ ನಿಂತಿದ್ದ ಲಾರಿಗೆ ಗುದ್ದಿದೆ.
ಶ್ರೀಪತಿರಾವ್ ಭೀಮರಾವ್ ಸಾಳಂಕೆ (60), ಚಂದ್ರಾಬಾಯಿ (80), ಅಂಬುಬಾಯಿ (70) ಸ್ಥಳದಲ್ಲೇ ಸತ್ತರೆ, ಚಂದಿರಮ್ಮ (65) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಗಾಯಗೊಂಡವರನ್ನು ಗುರುಮಿಟ್ಕಲ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Comments
Story first published: Saturday, May 8, 2010, 14:19 [IST]