ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಾಲಪ್ಪ ಪ್ರಕರಣ ಸಿಬಿಐ ತನಿಖೆ ಇಲ್ಲ : ಆಚಾರ್ಯ
ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿದೆ. ಯಾವ ಪ್ರಭಾವವೂ ಇಲ್ಲದೇ ತನಿಖೆ ನಡೆಯಲಿದೆ. ಅಲ್ಲದೇ ಸತ್ಯ ಹೊರಬರಲಿದೆ ಎಂದರು. ಮುಂಬರುವ ಗ್ರಾಮ ಪಂಚಾಯತ್ ಚುನಾವಣೆ ಮೇಲೆ ಈ ಪ್ರಕರಣ ಯಾವ ಪರಿಣಾಮವೂ ಬೀರುವುದಿಲ್ಲ. ಆರೋಪ ಬಂದಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹರತಾಳು ಹಾಲಪ್ಪ ಅವರ ಕೆಲಸ ಸಮರ್ಥಿನೀಯ ಎಂದು ಆಚಾರ್ಯ ಹೇಳಿದರು.
ಹಾಲಪ್ಪ ಅವರ ಮೇಲೆ ಗಂಭೀರ ಆರೋಪ ಬಂದಿದೆ. ಈ ಪ್ರಕರಣದಿಂದ ಅವರನ್ನು ಬಚಾವ್ ಮಾಡುವ ಯಾವ ಕೆಲಸವೂ ಸರಕಾರ ಮಾಡುತ್ತಿಲ್ಲ. ಸತ್ಯ ಹೊರಗೆ ಬರಬೇಕು ಎನ್ನುವುದು ಸರಕಾರದ ಆಶಯ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆಲಸ ಮಾಡಲಿದೆ. ಆದರೆ, ಪ್ರತಿಪಕ್ಷಗಳು ಆಗ್ರಹಿಸುವಂತೆ ಹಾಲಪ್ಪ ಅತ್ಯಾಚಾರ ಪ್ರಕರಣನ್ನು ಸಿಬಿಐ ತನಿಖೆ ವಹಿಸಲು ಸಾಧ್ಯವಿಲ್ಲ. ರಾಜ್ಯ ಸಿಐಡಿ ಇಲಾಖೆ ಸಮರ್ಥವಾಗಿದೆ ಎಂದು ಅವರು ಪ್ರತಿಪಾದಿಸಿದರು.
Comments
ಹರತಾಳು ಹಾಲಪ್ಪ ಅತ್ಯಾಚಾರ ವಿ ಎಸ್ ಆಚಾರ್ಯ ಶಿವಮೂಗ್ಗ ನಿರೀಕ್ಷಣಾ ಜಾಮೀನು ಯಡಿಯೂರಪ್ಪ ಸಿಐಡಿ ಚಂದ್ರಾವತಿ haratal halappa sex scandal rape vs acharya anticipatory bail cid probe yediyurappa shivamogga
Story first published: Wednesday, May 5, 2010, 17:45 [IST]