ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾಡ ಬಾಂಬ್ ಇಟ್ಟವನಿಗೆ ಗಡೀಪಾರು?
ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್, ಚೆಳ್ಳಗುರ್ಕಿ ಅಂಜಿನಪ್ಪ ರೌಡಿಶೀಟರ್ ಅಗಿದ್ದಾನೆ. ಈತನಿಗೆ ಗಡೀಪಾರು ಶಿಕ್ಷೆ ವಿಧಿಸಲು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಿ ಶಿಫಾರಸು ಮಾಡಲಾಗಿದೆ. ನಾಡಬಾಂಬ್ ಪತ್ತೆ ಪ್ರಕರಣದಲ್ಲಿ ಆರೋಪಿತರಾಗಿರುವ ಈತನ ಮಗ ಕುಬೇರ ಹಾಗೂ ಇತರರನ್ನು ಕೂಡ ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಹೇಳಿದರು.
ಚೆಳ್ಳಗುರ್ಕಿ ಗ್ರಾಮದ 3, 4 ಮತ್ತು 5ನೇ ವಾರ್ಡ್ನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ಭಯದ ವಾತಾವರಣ ಮೂಡಿಸಿ ಅವರನ್ನು ಕಣದಿಂದ ನಿವೃತ್ತಿಗೊಳಿಸಿ ತಮ್ಮ ಪರ ಅಭ್ಯರ್ಥಿಗಳು ಅವಿರೋಧ ಆಯ್ಕೆ ಆಗಬೇಕು ಎನ್ನುವ ಉದ್ದೇಶಕ್ಕಾಗಿ ಬಂಧಿತನು ಪಿವಿಸಿ ಪೈಪ್ನಲ್ಲಿ ಏಳು ಸಜೀವ ನಾಡಬಾಂಬ್ಗಳನ್ನು ಇರಿಸಿ ಬಿ. ಎರಿಸ್ವಾಮಿ ಎನ್ನುವವರ ಮನೆಯ ಸಮೀಪದಲ್ಲಿ ಹಾಕಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.ಬೆಂಗಳೂರಿನ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸೋಮವಾರ ಬೆಳಗ್ಗೆ ಈ ಬಾಂಬ್ಗಳನ್ನು ನಿಷ್ಕ್ರಿಯಗೊಳಿಸಿತ್ತು.
Comments
ಬಳ್ಳಾರಿ ಕ್ರೈಂ ಚುನಾವಣೆ ನಾಡ ಬಾಂಬ್ ಗ್ರಾಮ ಪಂಚಾಯತಿ ಬಾಂಬ್ ನಿಷ್ಕ್ರಿಯ ದಳ ರೋಹಿಣಿ ನಾಗರಿಕ ಪತ್ರಕರ್ತ crude bomb gram panchayat election rohini bellary citizen reporter crime beat
Story first published: Wednesday, May 5, 2010, 11:43 [IST]