ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಮರಾಮ ಏನ್ರೀ ಇದು ಹಾಲಪ್ಪನ ಕತೇ...
ಹಾಲಪ್ಪ ಪ್ರಕರಣ ಬೆಳಕಿಗೆ ಬಂದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಾಲಪ್ಪ ಅತ್ಯಾಚಾರ ನಡೆಸಿರುವುದು ಸಾಬೀತಾದಲ್ಲಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದರು. ಹಾಲಪ್ಪ ಪ್ರಕರಣ ಪತ್ರಿಕೆಯಲ್ಲಿ ಬಂದಿದೆ. ಅದನ್ನು ಓದಿಲ್ಲ. ಓದುವ ಮನಸ್ಸು ಆಗಲಿಲ್ಲ. ಸಚಿವರೊಬ್ಬರು ಇಂತಹ ಗಂಭೀರ ಆರೋಪಕ್ಕೆ ಸಿಲುಕಿರುವುದು ಖಂಡನೀಯ ಸಂಗತಿ. ಇದಕ್ಕಿಂತ ಹೆಚ್ಚೇನೂ ಹೇಳುವುದಿಲ್ಲ ಎಂದು ಗೌಡ ಹೇಳಿದರು.
ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಸಚಿವರಾಗಿದ್ದ ಕಿತ್ತೂರು ಅವರ ಮೇಲೆ ಇದೇ ಆರೋಪ ಬಂದಿತ್ತು. ಅಂದಿನ ಸರಕಾರ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಂಡಿತ್ತು. ಈ ಪ್ರಕರಣದಲ್ಲಿ ಕೂಡಾ ಜನತೆ ಅದನ್ನೇ ಬಯಸುತ್ತಿದೆ ಎಂದು ದೇವೇಗೌಡ ಹೇಳಿದರು. ರಾಮನ ಹೆಸರು ಹೇಳಿಕೊಂಡು ದೇಶ ಹಾಳು ಮಾಡಿದ ಬಿಜೆಪಿ ಹಾಲಪ್ಪ ಪ್ರಕರಣವನ್ನು ಏನು ಮಾಡುತ್ತಿದೆ ನೋಡೋಣ ಎಂದರು.
ಹರತಾಳು ಹಾಲಪ್ಪ ದೇವೇಗೌಡ ಯಡಿಯೂರಪ್ಪ ಶಿವಮೊಗ್ಗ ಅತ್ಯಾಚಾರ ಸಿಐಡಿ ಚಂದ್ರಾವತಿ ವೆಂಕಟೇಶ್ ಮೂರ್ತಿ haratal halappa deve gowda yediyurappa sex scandal ಹಾಲಪ್ಪ shivamogga
Story first published: Wednesday, May 5, 2010, 11:39 [IST]