ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಸಬ್ ಹಣೆಬರಹ ನಿರ್ಧಾರಕ್ಕೆ ಕ್ಷಣಗಣನೆ
2008ರ 26/11ರ ಭಯೋತ್ಪಾದನಾ ದಾಳಿಯ ನಡೆಸಿದ ತಂಡದಲ್ಲಿ ಈಗ ಉಳಿದಿರುವ ಏಕೈಕ ಉಗ್ರ ಕಸಬ್ ಜೊತೆಗೆ , ಸಂಚು ರೂಪಿಸಲು ಸಹಕರಿಸಿದ ಭಾರತೀಯ ಹಣೆಬರಹವೂ ನಾಳೆ ತಿಳಿಯಲಿದೆ. ಲಷ್ಕರ್ ಇ ತೋಯ್ಬಾ ಸಂಘಟನೆಯ ಆದೇಶದ ಮೇರೆಗೆ ಫರೀದ್ ಕೋಟ್ ನ ನಿವಾಸಿಯಾಅದ ಕಸಬ್, ತನ್ನೊಂದಿಗೆ ಹತ್ತು ಜನ ಭಯೋತ್ಪಾದಕರನ್ನು ಮುಂಬೈಗೆ ಬಂದು, 26/11ದಾಳಿಯ ನೇತೃತ್ವ ವಹಿಸಿದ್ದ. ಈ ದಾಳಿಯಲ್ಲಿ 25 ವಿದೇಶಿಯರು ಸೇರಿದಂತೆ 166 ಜನರು ಸಾವನ್ನಪ್ಪಿದ್ದರು ಹಾಗೂ 305 ಜನ ಗಾಯಗೊಂಡಿದ್ದರು.
ಭಾರತದ ಫಾಹೀಮ್ ಅನ್ಸಾರಿ ಹಾಗೂ ಸಭಾವುದ್ದೀನ್ ಅಹ್ಮದ್ ಈ ದಾಳಿಯ ಸಂಚು ರೂಪಿಸಿರುವ ಆರೋಪ ಹೊತ್ತಿದ್ದಾರೆ. ಇದಲ್ಲದೆ, ಇತರೆ ಉದ್ದೇಶಿತ ಗುರಿಗಳ ನಕ್ಷೆಯನ್ನು ತಯಾರಿಸಿ ಲಷ್ಕರ್ ಮುಖಂಡರಿಗೆ ರವಾನಿಸಿರುವ ಆರೋಪವು ಇವರ ಮೇಲಿದೆ.ಎಲ್ಲಾ ಆರೋಪಿಗಳ ಆರೋಪ ಸಾಬೀತಾದರೆ ಮರಣದಂಡನೆ ಶಿಕ್ಷೆ ಸಿಗುವ ನಿರೀಕ್ಷೆಯಿದೆ.
Comments
ಅಜ್ಮಲ್ ಕಸಬ್ ಮುಂಬೈ ಸ್ಫೋಟ 2008 ಮುಂಬೈ ನ್ಯಾಯಾಲಯ ಭಯೋತ್ಪಾದನೆ ajmal kasab mumbai terror attack mumbai terrorism millitants
Story first published: Monday, May 3, 2010, 11:33 [IST]