ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯುಲಿಪ್ ವಿವಾದ: ಕೇಂದ್ರ,ವಿಮಾ ಕಂಪನಿಗೆ ನೋಟಿಸ್
ನ್ಯಾಯಮೂರ್ತಿ ಎಸ್ ಹೆಚ್ ಕಪಾಡಿಯಾ ನೇತೃತ್ವದ ಪೀಠ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಅರ್ಜಿದಾರರಿಂದಲೂ ಉತ್ತರಿಸುವಂತೆ ಸೂಚಿಸಿದೆ. ಸೆಬಿ, ವಿಮಾ ಕಂಪೆನಿಗಳು ಹಾಗೂ ಎಲ್ ಐಸಿ ಮುಂಬೈನಲ್ಲಿದ್ದು, ಇದರ ವಿಚಾರಣೆ ಬಾಂಬೆ ಹೈ ಕೋರ್ಟಿನಲ್ಲಿ ನಡೆದರೆ ಸೂಕ್ತ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಸೆಬಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಅಟರ್ನಿ ಜನರಲ್ ಜಿ ಇ ವಾಹನ್ವತಿ ಅವರು ಸುಪ್ರೀಂ ಕೋರ್ಟಿನಲ್ಲೇ ವಿಚಾರಣೆ ನಡೆಸಲು ಕೋರಿದರು. ಸೆಬಿ ಹಾಗೂ ಐಆರ್ ಡಿಎ ವಿವಾದದ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ ಪೀಠ ಎರಡೂ ಸಂಸ್ಥೆಗಳ ಮೇಲೆ ಏಕೆ ಉನ್ನತ ಪ್ರಾಧಿಕಾರವೊಂದನ್ನು ರಚಿಸಬಾರದು ಎಂದೂ ಪ್ರಶ್ನಿಸಿತು. ಮುಂದಿನ ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಲಾಯಿತು.
Comments
ನಿಷೇಧ ಎಸ್ ಬಿಐ ಎಲ್ ಐಸಿ ರಿಲಯನ್ಸ್ ಸೆಬಿ ಐಸಿಐಸಿಐ ಸುಪ್ರೀಂಕೋರ್ಟ್ sebi irda insurance sbi reliance ban supreme court
Story first published: Friday, April 30, 2010, 16:54 [IST]