ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯದ ನಾಲ್ಕು ಕಡೆ ಅನಿಲ ವಿದ್ಯುತ್ ಘಟಕ
ಸಂಪುಟ ಸಭೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವ ವಿ ಎಸ್ ಆಚಾರ್ಯ, ಆ ಸಂಬಂಧ ಡಿಸೆಂಬರ್ ವೇಳೆಗೆ ಯೋಜನಾ ವರದಿ ಸಿದ್ಧವಾಗಲಿದೆ ಎಂದರು. ವಿದ್ಯುತ್ ಉತ್ಪಾದಿಸಲು ಮೂರೂ ಘಟಕಗಳಿಗೆ ವಾರ್ಷಿಕ 3.2 ದಶಲಕ್ಷ ಟನ್ ಅನಿಲ ಬೇಕಾಗುತ್ತದೆ. ಇದಕ್ಕಾಗಿ ಭಾರತೀಯ ಅನಿಲ ಪ್ರಾಧಿಕಾರ 2012 ರೊಳಗೆ ಪೈಪ್ ಲೈನ್ ಅಳವಡಿಸಲಿದೆ. ಅಷ್ಟರೊಳಗೆ ಅನಿಲ ಹಂಚಿಕೆ ಪ್ರಮಾಣ ನಿಗದಿಯಾಗುತ್ತದೆ.
ಘಟಕ ಸ್ಥಾಪನೆಗೆ ತಲಾ 200-300 ಎಕರೆ ಜಾಗ ಅಗತ್ಯವಿದ್ದು, ಕೆಐಎಡಿಬಿ ಇದರ ವ್ಯವಸ್ಥೆ ಮಾಡಲಿದೆ. ಅಲ್ಲದೇ ಜಲಾಶಯಗಳಿಂದ ನೀರಿನ ಸೌಲಭ್ಯ ಪಡೆಯಲು ಉದ್ದೇಶಿಸಲಾಗಿದೆ. ಇದಲ್ಲದೆ ಬೆಂಗಳೂರಿನ ಬಿಡದಿ ಬಳಿ ಕರ್ನಾಟಕ ವಿದ್ಯುತ್ ನಿಗಮದ ವತಿಯಿಂದ ಘಟಕ ಸ್ಥಾಪಿಸುವ ಪ್ರಸ್ತಾವನೆಗೂ ಸಂಪುಟ ಒಪ್ಪಿಗೆ ನೀಡಿದೆ ಎಂದು ಆಚಾರ್ಯ ವಿವರಿಸಿದರು.
Comments
ವಿ ಎಸ್ ಆಚಾರ್ಯ ಲೋಡ್ ಶೆಡ್ಡಿಂಗ್ ಬೆಂಗಳೂರು ವಿದ್ಯುತ್ ಮುಂಡರಗಿ ಹರಪನಹಳ್ಳಿ ಕನ್ನಡ ವಾರ್ತೆ vs acharya load shedding bangalore
Story first published: Friday, April 30, 2010, 12:27 [IST]