ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯುಪಿಎಗೆ ಮುಸ್ಲಿಮರ ನೋವಿನ ಅರಿವಿಲ್ಲ
ಲೋಕಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಲಾಲೂ ಮುಸ್ಲಿಮರಿಗೆ ಸರಕಾರಿ ಉದ್ಯೋಗದಲ್ಲಿ ಗರಿಷ್ಠ ಆದ್ಯತೆ ನೀಡಬೇಕು ಅಲ್ಪಸಂಖ್ಯಾತರ ಅಭಿವೃದ್ಧಿ ಕುರಿತ ಸಾಚಾರ್ ಮತ್ತು ರಂಗನಾಥ್ ಮಿಶ್ರಾ ಆಯೋಗಗಳ ವರದಿಗಳ ಜಾರಿಗೆ ಸರಕಾರ ಬದ್ಧವಾಗಿದೆಯೇ? ಯುಪಿಎ ಸರಕಾರವು ಮಹಿಳಾ ಮೀಸಲಾತಿಗೆ ಮುಂದಾಗಿರುವಂತೆ, ಮುಸ್ಲಿಮರಿಗೂ ಮೀಸಲಾತಿ ಒದಗಿಸಲು ಸಂವಿಧಾನಕ್ಕೆ ತಿದ್ದುಪಡಿ ತರಲು ಸರಕಾರ ಸಿದ್ಧವೇ ಎಂದು ಪ್ರಶ್ನಿಸಿದರು.
ಇದಕ್ಕೆ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಉತ್ತರಿಸಲು ನಿರಾಕರಿಸಿದಾಗ, ಕೋಪಗೊಂಡ ಲಾಲೂ, ಯುಪಿಎ ಸರ್ಕಾರ ಮುಸ್ಲಿಂ ವಿರೋಧಿ ಎಂದು ಜರೆದರು. ಈ ಸಂಬಂಧ ಒಂದು ಮನವಿಯನ್ನು ನೀಡಿದಲ್ಲಿ, ಅದನ್ನು ಸದನದಲ್ಲಿ ಚರ್ಚೆ ನಡೆಸಬಹುದಾಗಿದೆ ಎಂದು ಸ್ಪೀಕರ್ ಮೀರಾ ಕುಮಾರ್ ಹೇಳಿದರೂ, ಕೇಳದ ಲಾಲೂ ಹಾಗೂ ಮುಲಾಯಂ ಸದನದಿಂದ ಹೊರನಡೆದರು.
Comments
ಯುಪಿಎ ಮುಲಾಯಂ ಸಿಂಗ್ ಯಾದವ್ ಕಾಂಗ್ರೆಸ್ ಲೋಕಸಭೆ ಮೀರಾಕುಮಾರ್ ಮುಸ್ಲಿಂ upa lalu prasad yadav congress meira kumar lok sabha ಲಾಲೂ ಪ್ರಸಾದ್ ಯಾದವ್
Story first published: Thursday, April 29, 2010, 16:16 [IST]