ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದೇಶದ್ರೋಹಿ ಭಾರತೀಯ ರಾಜತಂತ್ರಜ್ಞೆ ಬಂಧನ
ಇಸ್ಲಾಮಾಬಾದ್ ನ ಭಾರತೀಯ ರಾಯಭಾರಿ ಕಚೇರಿಯ ಮಾಧ್ಯಮ ವಿಭಾಗದಲ್ಲಿ ಕಾರ್ಯದರ್ಶಿಯಾಗಿದ್ದ ಮಾಧುರಿ ಬಗ್ಗೆ 9 ತಿಂಗಳ ಹಿಂದೆಯೇ ಶಂಕೆ ಮೂಡಿತ್ತು. ವಿದೇಶಿ ವ್ಯವಹಾರಗಳ ಸಚಿವಾಲಯ ಮತ್ತು ಭಾರತದ ಬೇಹುಗಾರಿಕೆ ಸಂಸ್ಥೆ(ರಾ) ಈ ಬಗ್ಗೆ ತನಿಖೆ ನಡೆಸಿದಾಗ ಶಂಕೆ ನಿಜವಾಗಿದೆ. ಆಕೆ ಪಾಕಿಸ್ತಾನದ ಐಎಸ್ಐ ಮತ್ತಿತರ ಸಂಸ್ಥೆಗಳಿಗೆ ಭಾರತದ ಪ್ರಮುಖ ಮಾಹಿತಿಗಳನ್ನು ರವಾನಿಸುತ್ತಿದ್ದಳು ಎಂದು ಕೇಂದ್ರ ಗೃಹ ಕಾರ್ಯದರ್ಶಿ ಜಿ ಕೆ ಪಿಳ್ಳೈ ತಿಳಿಸಿದ್ದಾರೆ.
ಥಿಂಪುವಿನಲ್ಲಿ ನಡೆಯುವ ಸಾರ್ಕ್ ಶೃಂಗಸಭೆಯಲ್ಲಿ ಅವರ ಸೇವೆ ಅಗತ್ಯ ಎಂದು ಉಪಾಯದಿಂದ ಅವರನ್ನು ದಿಲ್ಲಿಗೆ ಕರೆಸಿಕೊಳ್ಳಲಾಗಿತ್ತು. ಕಳೆದ ವಾರ ಆಕೆಯ ಪೂರ್ವ ದಿಲ್ಲಿಯ ನಿವಾಸದಲ್ಲಿ ಬಂಧಿಸಲಾಯಿತು. ಸ್ಥಳೀಯ ನ್ಯಾಯಾಲಯ ಆಕೆಯನ್ನು 10 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆಕೆ ತನ್ನ ಕೃತ್ಯ ಒಪ್ಪಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.
Comments
ಭಾರತ ಪಾಕಿಸ್ತಾನ ಇಸ್ಲಾಮಾಬಾದ್ ಐಎಸ್ಐ ರಾ ಎಸ್ಎಂ ಕೃಷ್ಣ ಮನಮೋಹನ್ ಸಿಂಗ್ ಕನ್ನಡ ವಾರ್ತೆ pakistan islamabad isi raw sm krishna manmohan singh
Story first published: Wednesday, April 28, 2010, 11:37 [IST]