ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ರಿಯಕರನಿಗಾಗಿ ಮಾಧುರಿಯಿಂದ ದೇಶದ್ರೋಹ ಕೃತ್ಯ
ಸಾರ್ಕ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಥಿಂಪುಗೆ ತೆರಳಿರುವ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಇಸ್ಲಾಮಾಬಾದ್ ನಲ್ಲಿ ಭಾರತೀಯ ರಾಜತಾಂತ್ರಿಕ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾಧುರಿ ಗುಪ್ತಾ ಅವರು ಪಾಕಿಸ್ತಾನದ ಐಎಸ್ಐ ಸಂಸ್ಥೆಗೆ ಮಾಹಿತಿ ರವಾನಿಸಿರುವ ಅಂಶ ತಿಳಿದು ಬಂದಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಬಂಧಿತ ಅಧಿಕಾರಿ ಪೊಲೀಸ್ ವಶದಲ್ಲಿದ್ದಾರೆ ಎಂದು ಕೃಷ್ಣಾ ವಿವರಿಸಿದರು.
ಪಾಕ್ ರಾಜಧಾನಿಯಲ್ಲಿನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಮಾಧ್ಯಮ ಮತ್ತು ಮಾಹಿತಿ ವಿಭಾಗದಲ್ಲಿ ಎರಡನೇ ಹಂತದ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಮಾಧುರಿ ಕಳೆದ ಎರಡು ವರ್ಷಗಳಿಂದ ಭಾರತಕ್ಕೆ ಸಂಬಂಧಪಟ್ಟ ಗೌಪ್ಯ ರಕ್ಷಣಾ ಮಾಹಿತಿಗಳನ್ನು ಐಎಸ್ಐಗೆ ಹಸ್ತಾಂತರಿಸುತ್ತಿದ್ದ ಆರೋಪದ ಮೇಲೆ ಐದು ದಿನಗಳ ಹಿಂದೆಯೇ ಬಂಧನಕ್ಕೊಳಗಾಗಿದ್ದಾಳೆ.
Comments
ಎಸ್ಎಂ ಕೃಷ್ಣ ಭಾರತ ಪಾಕಿಸ್ತಾನ ಇಸ್ಲಾಮಾಬಾದ್ ಐಎಸ್ಐ ರಾ ಕನ್ನಡ ವಾರ್ತೆ sm krishna pakistan islamabad isi raw kannada news
Story first published: Wednesday, April 28, 2010, 14:43 [IST]