ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿದ್ದೆಪೋತ ಸ್ವಾಮೀಜಿಗೆ ಮಂಪರು ಪರೀಕ್ಷೆ

By Mahesh
|
Google Oneindia Kannada News

Nithyananda
ಬೆಂಗಳೂರು, ಏ.25: ನಿತ್ಯ ನಿದ್ದೆ ಬಂದಂತೆ ನಾಟಕವಾಡುತ್ತಿರುವ ಸ್ವಾಮಿ ನಿತ್ಯಾನಂದನ ಬಾಯಿ ಬಿಡಸಲು ಪೊಲೀಸರು ಹೆಣಗಾಡುತ್ತಿದ್ದಾರೆ. ನಾಲ್ಕು ದಿನಗಳ ಕಾಲ ಸಿಐಡಿ ಪೊಲೀಸರ ವಶದಲ್ಲಿರುವ ನಿತ್ಯಾನಂದ ಶನಿವಾರ ಕೂಡ ವಿಚಾರಣೆಗೆ ಸ್ಪಂದಿಸಲಿಲ್ಲ. ಉಪಾಯಗಾಣದೆ, ಪೊಲೀಸರು ಮಂಪರು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದ್ದಾರೆ.

ನಾನು ನಿದ್ದೆ ಬರುತ್ತಿದೆ ಎಂದು ಸಬೂಬು ಹೇಳಿ ಪೊಲೀಸರಿಂದ ತಪ್ಪಿಸಿಕೊಳ್ಳಲು ನಿತ್ಯಾನಂದ ಯತ್ನಿಸುತ್ತಿದ್ದಾನೆ. ಆದ್ದರಿಂದ ನ್ಯಾಯಾಲಯದ ಅನುಮತಿ ಪಡೆದು ಉಳಿದೆರಡು ದಿನಗಳಲ್ಲಿ ಮಂಪರು ಪರೀಕ್ಷೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಪೊಲೀಸರು ಕೊಟ್ಟ ಊಟವನ್ನು ನಿರಾಕರಿಸಿದ ನಿತ್ಯಾನಂದ, ಡ್ರೈ ಫುಡ್ ಬೇಕೆಂದು ಒತ್ತಾಯಿಸಿ, ಶಿಷ್ಯನೊಬ್ಬನಿಂದ ಆಹಾರ ತರಿಸಿಕೊಂಡು ತಿಂದಿದ್ದಾನೆ.

ಚಪ್ಪಲಿ ಎಸೆದವನಿಗೆ ಜಾಮೀನು: ರಾಮನಗರದಲ್ಲಿ ಕಾಮಿಸ್ವಾಮಿಗೆ ಚಪ್ಪಲಿ ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸ್ವಾಗತ ಕೋರಿದ್ದ ಶಿಕ್ಷಕ ಶ್ರೀನಿವಾಸ್ ಅವರಿಗೆ ಸಿವಿಲ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X