ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೆಡಿಕಲ್ ಕಾಲೇಜಿಗೆ ಎಂಸಿಐ ದಿಢೀರ್ ದಾಳಿ
ಈ ಸಂದರ್ಭದಲ್ಲಿ ಮೆಡಿಕಲ್ ಕಾಲೇಜಿಗೆ ಸಂಬಂಧಪಟ್ಟ ಅನೇಕ ದಾಖಲಾತಿಗಳನ್ನು ತಂಡ ಪರಿಶೀಲನೆ ನಡೆಸಿತು. ಈ ವರ್ಷದಲ್ಲಿಯೇ ಎರಡನೇ ಬಾರಿ ಈ ತಂಡ ಮೆಡಿಕಲ್ ಕಾಲೇಜಿಗೆ ಕಾಲಿಟ್ಟಿದೆ. ಕಳೆದ ಬಾರಿ ತಂಡವು ದಂಡ ಹಾಕಿದ್ದನ್ನು ಕೂಡ ಸ್ಮರಿಸಬಹುದು. ಶನಿವಾರ ಕಾಲೇಜಿನ ಆವರಣದಲ್ಲಿ ಕಾರುಗಳದ್ದೇ ಕಾರುಬಾರು. ಬಹುತೇಕ ಎಲ್ಲಾ ಗೈರುಹಾಜರಾದವರೂ ಇಂದು ಹಾಜರಾಗಿದ್ದು, ವಿಶೇಷವಾಗಿತ್ತು.
ಇತ್ತೀಚೆಗೆ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಿರಂತರ ಅವ್ಯವಹಾರ, ಭ್ರಷ್ಟಾಚಾರಗಳು ನಡೆಯುತ್ತಾ ಬಂದಿದ್ದು, ಇಡೀ ಕಾಲೇಜು ವಂಚನೆಯ ಗೂಡಾಗಿದೆ. ಸರ್ಕಾರ ತಕ್ಷಣವೇ ಇಲ್ಲಿನ ಅವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕೆಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿತ್ತು. ಮೆಡಿಕಲ್ ಕಾಲೇಜಿನ ಅವ್ಯವಹಾರಗಳನ್ನೆಲ್ಲ ದಾಖಲೆ ಸಮೇತ ಸುದ್ದಿಗೋಷ್ಠಿಯಲ್ಲಿ ಡಿಎಸ್ಎಸ್ ಮುಖಂಡ ಗುರುಮೂರ್ತಿ ವಿವರಿಸಿದ್ದರು.
Comments
ಶಿವಮೊಗ್ಗ ವಂಚನೆ ದಲಿತರು ಎಂಸಿಐ ಕ್ರೈಂ ನಾಗರಿಕ ಪತ್ರಕರ್ತ ಸೋಮನಾಥ್ mci citizen journalist somanath crime beat shivamogga
Story first published: Sunday, April 25, 2010, 15:24 [IST]