ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಂಟಿ ಸದನ ಸಮಿತಿ ಕೈಗೆ ಐಪಿಎಲ್ ಭೂತ
ಲೋಕಸಭೆ ಆರಂಭವಾಗುತ್ತಿದ್ದಂತೆಯೇ ನೇರವಾಗಿ ಐಪಿಎಲ್ ವಿವಾದವನ್ನು ಕೈಗೆತ್ತಿಕೊಂಡ ಪ್ರತಿಪಕ್ಷಗಳು ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದವು. ಕೇಂದ್ರ ಸರಕಾರದ ಇಬ್ಬರು ಮಂತ್ರಿಗಳು ಐಪಿಎಲ್ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಅವರ ಮೇಲೂ ಈ ಆರೋಪ ಬಂದಿದೆ. ಹೀಗಾಗಿ ಪ್ರಕರಣವನ್ನು ಜಂಟಿ ಸದನ ಸಮಿತಿಯ ತನಿಖೆಗೆ ವಹಿಸಬೇಕು ಎಂದು ವಿರೋಧಪಕ್ಷಗಳು ಪಟ್ಟು ಹಿಡಿದವು.
ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು, ಪ್ರತಿ ಸದಸ್ಯರ ಭಾವನೆಗಳು ಅರ್ಥವಾಗಿವೆ. ಕ್ರೀಡೆಯಲ್ಲಿ ಅವ್ಯವಹಾರ ಸಲ್ಲದು. ಹೀಗಾಗಿ ಐಪಿಎಲ್ ಅವ್ಯವಹಾರವನ್ನು ಜಂಟಿ ಸದನ ಸಮಿತಿಯ ತನಿಖೆಗೆ ವಹಿಸಲು ಸರಕಾರ ಚಿಂತನೆ ನಡೆಸಲಿದೆ. ಈ ಬಗ್ಗೆ ಪ್ರಧಾನಮಂತ್ರಿಯವರಿಗೆ ಸಂಪೂರ್ಣ ವಿವರ ನೀಡುವುದಾಗಿ ಅವರು ಹೇಳಿದರು.
Comments
ಐಪಿಎಲ್3 ಪ್ರಣಬ್ ಮುಖರ್ಜಿ ಶಶಿ ತರೂರ್ ಪ್ರಫುಲ್ ಪಟೇಲ್ ಲೋಕಸಭೆ ಬಿಜೆಪಿ ಮನಮೋಹನ್ ಸಿಂಗ್ ipl3 pranab mukherjee shashi tharoor praful patel lok sabha bjp manmohan singh
Story first published: Friday, April 23, 2010, 14:48 [IST]