ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡಿಯೂರಪ್ಪ ಭಸ್ಮಾಸುರ : ಉಗ್ರಪ್ಪ
ಜಿಲ್ಲಾ ಕಾಂಗ್ರೆಸ್ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡುತ್ತಿದ್ದ ಅವರು, ಆಡಳಿತ ಪಕ್ಷವು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅಡ್ಡ ದಾರಿಯ ಮೂಲಕ ಯಶಸ್ಸನ್ನು ಪಡೆದುಕೊಳ್ಳಲು ಹೊರಟಿದೆ. ಆದರೆ ಇದು ಮುಂದೊಂದು ದಿನ ಅವರಿಗೇ ಮುಳುವಾಗಿ ಪರಿಣಮಿಸಲಿದೆ ಎಂದು ಭವಿಷ್ಯ ನುಡಿದರು.
ಹಣ ಮತ್ತು ತೋಳ್ಬಲದಿಂದ ಬಿಜೆಪಿಯು ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಕಳೆದ 23 ತಿಂಗಳುಗಳಲ್ಲಿ ನಡೆದ ಇತರ ಚುನಾವಣೆಗಳನ್ನು ಗೆದ್ದುಕೊಂಡಿದೆ. ಅದೇ ರೀತಿ ಗ್ರಾಮ ಪಂಚಾಯತಿ ಚುನಾವಣೆಗಳಲ್ಲೂ ಗೆಲ್ಲುವ ಕನಸು ನಮ್ಮ ಮುಖ್ಯಮಂತ್ರಿಯವರದ್ದು. ಆದರೆ ಇಲ್ಲಿ ಅವರಿಗೆ ಭ್ರಮನಿರಸನ ಎದುರಾಗುತ್ತದೆ ಎಂದು ಉಗ್ರಪ್ಪ ಆತ್ಮವಿಶ್ವಾಸದಿಂದ ಹೇಳಿದರು.
Comments
ವಿ ಎಸ್ ಉಗ್ರಪ್ಪ ಯಡಿಯೂರಪ್ಪ ಬಿಬಿಎಂಪಿ ಚುನಾವಣೆ ಬಿಜೆಪಿ ಕಾಂಗ್ರೆಸ್ ಗ್ರಾಮ ಪಂಚಾಯತಿ ಚುನಾವಣೆ vs ugrappa yediyurappa bbmp polls bjp congress gram panchayat polls
Story first published: Saturday, April 17, 2010, 14:52 [IST]