ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೇ 10ಕ್ಕೆ ಪಿಯುಸಿ ಫಲಿತಾಂಶ, ಕಾಗೇರಿ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಶುಕ್ರವಾರ ಮಾತನಾಡುತ್ತಿದ್ದರು. ಪಾಲಕರು ಡೊನೇಷನ್ ಪಡೆಯುವ ಖಾಸಗಿ ವಿದ್ಯಾಸಂಸ್ಥೆಗಳ ವಿರುದ್ಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿಗೆ ದೂರು ನೀಡಬೇಕು. ಇಂಥ ದೂರುಗಳನ್ನು ಪರಿಶೀಲಿಸಲು ರಾಜ್ಯ ಮಟ್ಟದಲ್ಲಿ ವಿಶೇಷ ತಂಡ ರಚಿಸಲು ತೀರ್ಮಾನಿಸಲಾಗಿದೆ. ಈ ತಂಡ ಸಂಬಂಧಿತ ವಿದ್ಯಾಸಂಸ್ಥೆಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಲಿದೆ. ದೂರು ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮೌಲ್ಯಮಾಪನ ಬಹಿಷ್ಕರಿಸಿರುವವರ ಹಿಂದೆ ರಾಜಕೀಯ ಕೈವಾಡವಿದೆ ಎಂಬ ಆರೋಪ ಸರಿಯಿಲ್ಲ. ಮುಂದಿನ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂಬ ಆರೋಪ ನಿರಾಧಾರ. ಹಾಗೊಂದು ವೇಳೆ ರಾಜಕೀಯ ಬೆರೆಸಿದ್ದರೆ ನಾವೂ ರಾಜಕೀಯವಾಗಿಯೇ ಉತ್ತರಿಸುತ್ತೇವೆ ಎಂದು ಕಾಗೇರಿ ತಿರುಗೇಟು ನೀಡಿದರು.
Comments
ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಣ ಕರ್ನಾಟಕ ವಿದ್ಯಾರ್ಥಿ karnataka sslc puc vishweshwara hegde kageri kseeb students ಎಸ್ಸೆಸ್ಸೆಲ್ಸಿ ಫಲಿತಾಂಶ ಪಿಯುಸಿ ಫಲಿತಾಂಶ
Story first published: Saturday, April 17, 2010, 13:08 [IST]