ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾರದಾ ಜಾಗಕ್ಕೆ ಉತ್ತರದ ಐಎಎಸ್ ಅಧಿಕಾರಿ?

By Mahesh
|
Google Oneindia Kannada News

HR Bharadwaj
ಬೆಂಗಳೂರು, ಏ.16: ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಕಾರ್ಯದರ್ಶಿ ಶಾರದಾ ಸುಬ್ರಹ್ಮಣ್ಯಂ ಅವರ ಜಾಗಕ್ಕೆ ಉತ್ತರ ಭಾರತ ಮೂಲದ ಐಎಎಸ್ ಅಕಾರಿ ಯನ್ನು ನೇಮಿಸಲು ಸಿದ್ಧತೆ ನಡೆದಿದೆ.

ವಿಶ್ವಾಸದ ಕೊರತೆ ಹಿನ್ನೆಲೆಯಲ್ಲಿ ಶಾರದಾ ಸುಬ್ರಹ್ಮಣ್ಯಂ ಸೇರಿದಂತೆ ಐವರು ಅಧಿಕಾರಿಗಳನ್ನು ರಜೆ ಮೇಲೆ ತೆರಳುವಂತೆ ಸೂಚಿಸಿದ್ದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಆ ಜಾಗಕ್ಕೆ ಬೇರೆ ಅಧಿಕಾರಿಯ ನೇಮಕಕ್ಕೆ ಆದೇಶಿಸಿದ್ದರು.

ಸರಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಹಾಗೂ ಮುಖ್ಯಮಂತ್ರಿಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಜತೆ ರಾಜ್ಯಪಾಲರು ಚರ್ಚೆ ನಡೆಸಿದ್ದಾರೆ. ಈ ಹುದ್ದೆಗೆ ಅರ್ಹರಾದ ಐಎಎಸ್ ಅಧಿಕಾರಿಗಳ ಪಟ್ಟಿಯನ್ನು ಶೀಘ್ರ ನೀಡುವಂತೆ ಸೂಚಿಸಲಾಗಿದ್ದರೂ, ಉತ್ತರ ಭಾರತ ಮೂಲದ ಕಾಂಗ್ರೆಸ್ ನಿಷ್ಠ ಐಎಎಸ್ ಅಧಿಕಾರಿಯ ನೇಮಕಕ್ಕೆ ತೆರೆಮರೆಯಲ್ಲಿ ಯತ್ನ ನಡೆದಿದೆ ಎನ್ನಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X