ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿ : ಎಂಇಎಸ್ ನಿಂದ ಮುಂಬೈ ಚೆಲೋ

By Mrutyunjaya Kalmat
|
Google Oneindia Kannada News

Belgaum Map
ಬೆಳಗಾವಿ, ಏ. 15 : ಗಡಿ ವಿಷಯ ದುರ್ಬಳಿಕೆಗೆ ಮುಂದಾಗಿರುವ (ಮಹಾರಾಷ್ಟ್ರ ಏಕೀಕರಣ ಸಮಿತಿ) ಎಂಇಎಸ್ ಏ.16 ರಂದು ಮುಂಬೈ ಚೆಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆ ದಿನ ಧರಣಿ, ವಿಧಾನಸಭೆಗೆ ಮುತ್ತಿಗೆ ಮತ್ತು ಸಚಿವರಿಗೆ ಘೇರಾವ್ ಹಾಕಲು ನಿರ್ಧರಿಸಿದ್ದು, ಮಹಾರಾಷ್ಟ್ರದ ವಿವಿಧ ಸಂಘಟನೆಗಳು ಕೈಜೋಡಿಸಿವೆ.

ಏ.15 ರಂದು ಸಂಜೆ ಬೆಳಗಾವಿಯಿಂದ ಎಂಇಎಸ್ ಕಾರ್ಯಕರ್ತರು ಮುಂಬೈಗೆ ತೆರಳಿದ್ದಾರೆ. ನಾಯಕರು ಈ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆ ಮತ್ತು ಪ್ರಚಾರ ನಡೆದಿದೆ. ಗಡಿ ಭಾಗ ಕೇಂದ್ರಾಡಳಿತ ಪ್ರದೇಶವಾಗಬೇಕು ಮತ್ತು ಕರ್ನಾಟಕ ಸರಕಾರ ಮರಾಠಿ ಭಾಷಿಕರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ನಿಲ್ಲಬೇಕು ಎನ್ನುವುದು ಈ ಧರಣಿ ಮುಖ್ಯ ಉದ್ದೇಶವಾಗಿದೆ.

ಎಂಇಎಸ್ ಏ.11 ರಂದು ಕೊಲ್ಲಾಪುರ ಚೆಲೋ ಕಾರ್ಯಕ್ರಮ ಹಮ್ಮಿಕೊಂಡು ಕರ್ನಾಟಕದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು. ಇದೀಗ ಏ.16 ರಂದು ಮುಂಬೈ ಚೆಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X