ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೇಣುಕಾಚಾರ್ಯ ಜಯಲಕ್ಷ್ಮಿ ರಾಜಿ!
ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ 8ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಸಚಿವ ರೇಣುಕಾಚಾರ್ಯ ಹಾಗೂ ನರ್ಸ್ ಜಯಲಕ್ಷ್ಮಿ ಹಾಜರಾದದರೂ ಇಬ್ಬರು ರಾಜಿಯಾಗಿರುವ ಬಗ್ಗೆ ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಜಯಲಕ್ಷ್ಮಿ ರೇಣುಕಾಚಾರ್ಯ ವಿರುದ್ಧ ಹೂಡಲಾಗಿದ್ದ ಪ್ರಕರಣ ವಾಪಸ್ ಪಡೆದಿದ್ದರಿಂದ ನಾಲ್ಕು ವರ್ಷಗಳಿಂದ ಸಾಕಷ್ಟು ಕುತೂಹಲ ಕೆರಳಿಸಿದ್ದ ಪ್ರಕರಣ ಕೊನೆಗೂ ಸುಖಾಂತ್ಯಗೊಂಡಿತು.
ರಾಜಿ ಸಂಧಾನ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಯಲಕ್ಷ್ಮಿ, ಹಿರಿಯ ಸ್ವಾಮೀಜಿಯೊಬ್ಬರ ಮಧ್ಯೆಸ್ಥಿಕೆಯಲ್ಲಿ ರಾಜಿ ಸಂಧಾನವಾಗಿದೆ. ಹಿರಿಯರ ಮಾತಿಗೆ ಗೌರವ ನೀಡಿ ಹಳೆಯದನ್ನು ಮರೆತಿದ್ದೇನೆ ಎಂದು ಹೇಳಿದರು.
Comments
ರೇಣುಕಾಚಾರ್ಯ ನರ್ಸ್ ಜಯಲಕ್ಷ್ಮಿ ನ್ಯಾಯಾಲಯ ಯಡಿಯೂರಪ್ಪ ಬಿಜೆಪಿ ಪ್ರಕರಣ ಬೆಂಗಳೂರು renukacharya nurse jayalakshmi court yediyurappa life threat bangalore bjp
Story first published: Tuesday, April 13, 2010, 11:11 [IST]