ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಸವಣ್ಣ ತತ್ವದಡಿ ಕಾಂಗ್ರೆಸ್ ಪಕ್ಷ
ಬಾದಾಮಿ ತಾಲ್ಲೂಕಿನ ಶಿವಯೋಗ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಶಿವಯೋಗ ಮಂದಿರದ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಹಾನಗಲ್ ಕುಮಾರಸ್ವಾಮಿಗಳ ತೈಲ ವರ್ಣ ಚಿತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಎನ್ನ ದೇಹವೇ ದೇಗುಲ ಎಂದು ಪ್ರತಿಪಾದಿಸುವ ಮೂಲಕ ಪ್ರತಿ ಮನುಷ್ಯರೊಳಗೆ ದೇವರನ್ನು ಗುರುತಿಸಿದ ಬಸವಣ್ಣನವರು, 12 ನೇ ಶತಮಾನದಲ್ಲಿ ವಚನಗಳ ಮೂಲಕ ಸಾರಿದ ವೈಚಾರಿಕತೆ ಇಂದಿಗೂ ಪ್ರಸ್ತುತವಾಗಿದೆ ಎಂದರು.
ವೀರಶೈವ ಲಿಂಗಾಯಿತ ಸಮಾಜವನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸಿ,ಹಿಂದೂ, ಮುಸಲ್ಮಾನ, ಜೈನ, ಸಿಖ್ ಧರ್ಮಿಯರಿಗೆ ಜನಗಣತಿಯಲ್ಲಿ ನೀಡಿರುವ ಪ್ರತ್ಯೇಕ ಕಾಲಂ ಒದಗಿಸಬೇಕು ಎಂಬ ವೀರಶೈವ ಮಹಾಸಭೆಯ ಬೇಡಿಕೆ ಬಗ್ಗೆ ಸೋನಿಯಾ ಗಾಂಧಿ ಚಕಾರವೆತ್ತಲಿಲ್ಲ.
Comments
ಸೋನಿಯಾಗಾಂಧಿ ಬಸವಣ್ಣ ಕಾಂಗ್ರೆಸ್ ಬಾಗಲಕೋಟಿ ಲಿಂಗಾಯಿತ ಶತಮಾನೋತ್ಸವ sonia gandhi basavanna lingayat congress bagalkot centenary
Story first published: Tuesday, April 13, 2010, 10:33 [IST]