ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಂಡೇವಾಡ ನರಮೇಧದಲ್ಲಿ ಕನ್ನಡಿಗ ಹತ
ಪಾರ್ಥೀವ ಶರೀರ ಇಂದು ಹಾಸನಕ್ಕೆ ಬರಲಿದೆ. 1991 ರಲ್ಲಿ ಸಿಆರ್ ಪಿಎಫ್ ಸೇರಿದ್ದ ಶಿವಪ್ಪ 2011ರಲ್ಲಿ ನಿವೃತ್ತರಾಗಲಿದ್ದರು. ಪ್ರತಿ ಯುಗಾದಿಗೆ ಬರುತ್ತಿದ್ದ ಅವರು, ಈ ಸಲದ ಯುಗಾದಿ ಬಂದಿರಲಿಲ್ಲ. ಮೇನಲ್ಲಿ ಅಕ್ಕನ ಮಗಳ ಮದುವೆಗೆ ಬರುವವರಿದ್ದರು. ಇಂದು ಬೆಳಗ್ಗೆ ಶಿವಪ್ಪ ಹತ್ಯೆ ವಿಷಯ ಕುಟುಂಬದವರಿಗೆ ತಲುಪಿತು. ಪತ್ನಿ ಲಾವಣ್ಯ ಮಗ ಚೇತನ, ಮೂವರು ಸಹೋದರಿಯರು, ಮೂವರು ಸಹೋದರರನ್ನು ಅಗಲಿದ್ದಾರೆ.
ಮೃತದೇಹ ಈಗಾಗಲೇ ದೆಹಲಿ ತಲುಪಿದ್ದು, ಇಂದು ವಿಶೇಷ ವಿಮಾನದ ಮೂಲಕ ಇಂದು ಬೆಂಗಳೂರಿಗೆ ತರಲಾಗುವುದು. ಅವರ ಸ್ವಗ್ರಾಮ ಚಿಕ್ಕಬಸವನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
Comments
Story first published: Thursday, April 8, 2010, 10:07 [IST]