ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಾಲಿನ ದರ ಹೆಚ್ಚಳಕ್ಕೆ ಮುಹೂರ್ತವಿಟ್ಟ ಸಿಎಂ
ದರ ಏರಿಕೆಯಿಂದ ಬರುವ ಹೆಚ್ಚುವರಿ ಹಣವನ್ನು ಹಾಲು ಉತ್ಪಾದಕರಿಗೆ ನೀಡಿ ಹೈನುಗಾರಿಕೆ ಅಭಿವೃದ್ಧಿಗೆ ಪ್ರೋತ್ಸಾಹ ಕೊಡುವ ಉದ್ದೇಶ ನಮಗಿದೆ ಎಂದು ಹೇಳಿದರು. ಹಾಲಿನ ದರ ಹೆಚ್ಚಳಕ್ಕೆ ಮೊದಲೇ ತಾತ್ವಿಕ ಒಪ್ಪಿಗೆ ನೀಡಲಾಗಿತ್ತಾದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಕಾರಣ ತಡೆಹಿಡಿಯಲಾಗಿತ್ತು. ಈಗ ಮತಹಾಕಿ ಗೆಲ್ಲಿಸಿಕೊಟ್ಟ ಬೆಂಗಳೂರು ಜನತೆಯೇ ಬಿಜೆಪಿ ಸರಕಾರಕ್ಕೆ ಹಾಲಿನ ದರ ಏರಿಕೆಗೆ ಲೈಸೆನ್ಸ್ ನೀಡಿದಂತಾಗಿದೆ. ನೀರಿನ ಜೊತೆಗೆ ಹಾಲಿನ ದರವೂ ಏರುತ್ತಿರುವುದರಿಂದ ಬಡಜನತೆಗೆ ದುಬಾರಿ ಹಾಲಿನ ಜೊತೆಗೆ ನೀರನ್ನು ಬೆರೆಸಿ ಸೇವಿಸುವ ಅವಕಾಶವೂ ಇಲ್ಲದಂತಾಗಲಿದೆ.
ಮೈಸೂರು ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ಶೀಘ್ರದಲ್ಲೇ ನೇಮಿಸಲಾಗುವುದು, ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಯಾರನ್ನು ಉಸ್ತುವಾರಿ ಸಚಿವರಾಗುತ್ತಾರೆ ಎಂಬ ಗುಟ್ಟನ್ನು ಸಿಎಂ ಬಿಟ್ಟುಕೊಡಲಿಲ್ಲ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಶೋಭಾ ಕರಂದ್ಲಾಜೆ ಅವರು ಈ ಮುಂಚೆ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರು.
Comments
ಯಡಿಯೂರಪ್ಪ ಬೆಲೆ ಏರಿಕೆ ನಂದಿನಿ ಹಾಲು ಸಚಿವ ಸಂಪುಟ ಚುನಾವಣೆ ಮೈಸೂರು yediyurappa cabinet reshuffle price hike nandini milk mysore district news
Story first published: Tuesday, April 6, 2010, 18:32 [IST]