ಹಿರಿಯ ಪತ್ರಕರ್ತ ಬೆ.ಸು.ನಾ ಮಲ್ಯ ನೆನಪು
ರಾಜ್ಯದ ಮೊದಲ ಪತ್ರಿಕಾ ಅಕಾಡೆಮಿಯ ಸದಸ್ಯರಾಗಿದ್ದು, ಸಾಹಿತ್ಯಕ್ಷೇತ್ರದಲ್ಲಿ ಸುನಾಮ ಎಂಬ ಕಾವ್ಯನಾಮದಿಂದ ಖ್ಯಾತರಾಗಿದ್ದರು. ಅಖಿಲ ಭಾರತ ವೃತ್ತ ಪತ್ರಿಕಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾಗಿ ಸತತ ಮೂರು ವರ್ಷ ಆಯ್ಕೆಯಾಗಿದ್ದರು. ಸಂಜೆ ಪೆರ್ವಾಜೆಯಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಿತು.
ಬೆಸುನಾ ಮಲ್ಯ ಅವರ ಜೀವನದ ಸಂಕ್ಷಿಪ್ತ ಚಿತ್ರಣ:
*1927ರಲ್ಲಿ
ದ.ಕ.
ಜಿಲ್ಲೆಯ
ಕಾರ್ಕಳದ
ಬಳಿಯ
ಬೆಳುವಾಯಿಯಲ್ಲಿ
ಸುಬ್ರಾಯ
ನಾರಾಯಣ
ಮಲ್ಯ
ಜನನ.
*ವಿದ್ಯಾಭ್ಯಾಸದ
ತರುವಾಯ
ಕೆನರಾ
ಬ್ಯಾಂಕ್ನಲ್ಲಿ
ಉದ್ಯೋಗ
.
*1940
ರಲ್ಲಿ
ರಾಷ್ಟ್ರೀಯ
ಸ್ವಯಂ
ಸೇವಕ
ಸಂಘ(ಆರ್
ಎಸ್
ಎಸ್
)
ಸಂಪರ್ಕ.
*1948
ರಲ್ಲಿ
ಬೆಂಗಳೂರಿನಲ್ಲಿ
'ವಿಕ್ರಮ'
ವಾರಪತ್ರಿಕೆ
ಪ್ರಾರಂಭ,
ಗದಗಿನಲ್ಲಿದ
ಬ್ಯಾಂಕ್
ಉದ್ಯೋಗ
ಬಿಟ್ಟು
ಬೆಸುನಾ
ಅವರಿಂದ
ಸಂಪಾದಕತ್ವ
ಸ್ವೀಕಾರ.
*1948
ರಲ್ಲಿ
ಆರೆಸ್ಸೆಸ್
ಕರೆಯಿತ್ತ
ಸತ್ಯಾಗ್ರಹ'
ಆಂದೋಲನದಲ್ಲಿ
ಭಾಗಿಯಾಗಿ,
ಜೈಲುವಾಸ
ಅನುಭವಿಸಿ,
ಜೀವನ
ಪೂರ್ತಿ
ಅವಿವಾಹಿತರಾಗಿದ್ದರು.
*1953ರಿಂದ
1996
ವರೆಗೆ
ಸ್ವಾವಲಂಬಿ
ಪತ್ರಿಕೆಯಾಗಿ
'ವಿಕ್ರಮ'
ಹೊರಹೊಮ್ಮಲ್ಲು
ಮಲ್ಯರ
ಪರಿಶ್ರಮ
ಕಾರಣ.
*ಕನ್ನಡ
ಪತ್ರಿಕೋದ್ಯಮಕ್ಕೆ
ಸಂಬಂಧಿಸಿದಂತೆ
ಪಾರಿಭಾಷಿಕ
ಶಬ್ದಕೋಶ
ರಚಿಸಿದ್ದಾರೆ.
*ಕಡಿದಾಳ್
ಮಂಜಪ್ಪ,
ಎಸ್
ನಿಜಲಿಂಗಪ್ಪ,ತಿ.ತಾ.
ಶರ್ಮ,
ಮುತ್ಸದ್ದಿ
ರಾರಾಜಿ,
ನ್ಯಾಯಮೂರ್ತಿ
ಎಂ.ರಾಮಾಜೋಯಿಸ್
ಸೇರಿದಂತೆ
ಅಪಾರ
ಮಿತ್ರವೃಂದವನ್ನು
ಮಲ್ಯರು
ಪಡೆದಿದ್ದರು.
*ಸದಾ
ಚಿಂತನಶೀಲ
ಸುನಾಮ(ಬೇಸುನಾ
ಮಲ್ಯರ
ಕಾವ್ಯನಾಮ)ರಿಗೆ
ರಾಷ್ಟ್ರದ
ಉನ್ನತ
ಪತ್ರಿಕಾ
ಪ್ರಶಸ್ತಿ
'ನಚಿಕೇತ'
ನೀಡಿ
ಅಂದಿನ
ವಾಜಪೇಯಿ
ಸರ್ಕಾರ
ಗೌರವಿಸಿತ್ತು.
*1975
ರಲ್ಲಿ
ತುರ್ತು
ಪರಿಸ್ಥಿತಿಯಲ್ಲಿ
ವಾಜಪೇಯಿ,ಲಾಲ್ಕೃಷ್ಣ
ಅಡ್ವಾಣಿ
ಜತೆಗೆ
ಸೆರೆಮನೆ
ವಾಸ
ಅನುಭವಿಸಿದ್ದರು.
*ಕನ್ನಡ,
ಸಂಸ್ಕೃತ,
ಇಂಗ್ಲಿಷ್,
ಹಿಂದಿ,
ಮರಾಠಿ,
ಕೊಂಕಣಿ
ಭಾಷೆಗಳಲ್ಲಿ
ಪಾಂಡಿತ್ಯ
ಹೊಂದಿದ್ದರು.
*ಭಾರತ
ವೃತ್ತ
ಪತ್ರಿಕಾ
ಸಂಘದ
ಕಾರ್ಯಸಮಿತಿ
ಸದಸ್ಯ,
ರಾಜ್ಯದ
ಪ್ರಪ್ರಥಮ
ಪತ್ರಿಕಾ
ಅಕಾಡೆಮಿ
ಸದಸ್ಯ,
ಕರ್ನಾಟಕ
ಸಣ್ಣ
ಮತ್ತು
ಜಿಲ್ಲಾ
ಪತ್ರಿಕಾ
ಸಂಪಾದಕರ
ಸಂಘದ
ಅಧ್ಯಕ್ಷ,
ದೂರವಾಣಿ
ಸಮಿತಿ
ಸದಸ್ಯ,
ಅಖಿಲ
ಭಾರತ
ಸಂಪಾದಕ
ಕಾರ್ಯಪಡೆ
ಸದಸ್ಯ,
ವಿಶ್ವಹಿಂದೂ
ಪರಿಷತ್
ಕರ್ನಾಟಕ
ಪ್ರಾಂತ್ಯ
ಪ್ರಥಮ
ಕಾರ್ಯದರ್ಶಿ,
ರಾಜ್ಯ
ದೂರಸಂಪರ್ಕ
ವರ್ತುಲದ
ಸಲಹಾ
ಸಮಿತಿ
ಸದಸ್ಯರಾಗಿದ್ದರು.