ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಂಎಫ್ ಹುಸೇನ್ ಗೆ ಭಾರತರತ್ನ ನೀಡಿ!
ನಗರದ ಮರೀನ್ ಡ್ರೈವ್ ಪ್ರದೇಶದಲ್ಲಿ ಈ ಸಂಬಂಧ ಭಿತ್ತಿಪತ್ರವೊಂದನ್ನು ಹಾಕಿರುವ ಮುಂಬೈಯ ಶರೀಫ್ ನಾನಾ ಚುಡಾಸಮಾ, ಎಂಎಫ್ ಹುಸೇನ್ ಮತ್ತು ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಹುಸೇನ್ ನಮ್ಮ ಆಸ್ತಿ. ನಾವು ಜಾತ್ಯತೀತ ರಾಷ್ಟ್ರದವರು ಎಂದು ಹೇಳುತ್ತೇವೆ. ಹಾಗಾಗಿ ಅವರ ವಾಪಸಾತಿಗೆ ಅವಕಾಶ ನೀಡಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ಶರೀಫ್ ಹೇಳಿದ್ದಾರೆ.
ಹುಸೇನ್ ಅವರ ವಿವಾದದ ಬಗ್ಗೆ ಹೆಚ್ಚೇನು ಮಾತನಾಡದ ಶರೀಫ್, ಅದನ್ನು ಈಗ ಕೆದಕುವುದು ಬೇಡ. ಇದನ್ನು ಗಣನೆಗೆ ತೆಗೆದುಕೊಳ್ಳುವುದಾದರೆ ನಾವು ಖುಜರಾಹೋ ಕಲಾಕೃತಿಗಳನ್ನು ಕೂಡ ಆಕ್ಷೇಪಿಸಬೇಕಾಗುತ್ತದೆ ಎಂದಿದ್ದಾರೆ. ಹಿಂದೂ ದೇವತೆಗಳನ್ನು ಅವಮಾನಗೊಳಿಸಿದ್ದಕ್ಕಾಗಿ ಭಾರತಾದ್ಯಂತ ಅವರು ವಿರುದ್ಧ ಸುಮಾರು 900 ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಹುಸೇನ್ ಕತಾರ್ ಪೌರತ್ವ ಪಡೆದುಕೊಂಡಿದ್ದಾರೆ.
Comments
Story first published: Thursday, April 1, 2010, 15:44 [IST]