ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ದಿನದೊಳಗೆ ಹಾಲಿನ ದರ ಏರಿಕೆ

By Mrutyunjaya Kalmat
|
Google Oneindia Kannada News

Yeddyurappa
ಶಿವಮೊಗ್ಗ, ಮಾ. 31 : ರಾಜ್ಯದಲ್ಲಿ ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ 2-3 ದಿನಗಳೊಳಗೆ ಕೆಎಂಎಫ್ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ ನಿರ್ಣಯ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಶಿಕಾರಿಪುರ ತಾಲ್ಲೂಕು ಹುಚ್ಚುರಾಯಸ್ವಾಮಿ ದೇನಸ್ಥಾನದ ಚಾತ್ರೆಗೆ ಚಾಲನೆ ನೀಡಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಹೊರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಹಾಲಿನ ದರ ಕಡಿಮೆ. ಹಾಲಿನ ದರ ಹೆಚ್ಚಿಸುವುದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.

ರಾಜ್ಯದ 2 ಲಕ್ಷ ಬಡಜನರಿಗೆ ನಿವೇಶನ ಒದಗಿಸಲು ಯೋಜನೆ ರೂಪಿಸಲಾಗಿದೆ. ಕೇಂದ್ರ ಉದ್ಯೋಗ ಖಾತ್ರಿ ಯೋಜನೆಯಲ್ಲಿ 2008-09 ನೇ ಸಾಲಿನಲ್ಲಿ ರಾಜ್ಯ 357ಕೋಟಿ ರುಪಾಯಿ, 2009-10 ನೇ ಸಾಲಿನಲ್ಲಿ 2350 ಕೋಟಿ ರುಪಾಯಿ ಖರ್ಚು ಮಾಡಿದೆ. ಕಳೆದ ಸಾಲಿನ ಪ್ರಗತಿಯನ್ನು ಗಮನಿಸಿಈ ಬಾರಿ ಕೇಂದ್ರ 4600 ಕೋಟಿ ಖರ್ಚು ಮಾಡಲು ಅನುಮತಿ ನೀಡಿದೆ ಎಂದು ಯಡಿಯೂರಪ್ಪ ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X