ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾರಡಗಿಯಲ್ಲಿ ಸಂಭ್ರಮದ ವೀರಭದ್ರೇಶ್ವರ ರಥೋತ್ಸವ
ಸಹಸ್ರಾರು ಕಂಠಗಳ ಜಯಘೋಷಗಳ ನಡುವೆ ದೇವಸ್ಥಾನದ ಮಹಾದ್ವಾರದಿಂದ ಆರಂಭಗೊಂಡ ಭವ್ಯ ತೇರಿನ ಉತ್ಸವ ಪಾದಗಟ್ಟಿಯವರೆಗೆ ಜರುಗಿ ಪುನಃ ತೇರನ್ನು ದೇವಸ್ಥಾನಕ್ಕೆ ಕರೆತರಲಾಯಿತು. ಮೂರು ದಿನಗಳ ಪರ್ಯಂತ ಜರುಗಲಿರುವ ಈ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ವೀರಭದ್ರೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ, ಮಹಾಗಣಾರಾಧನೆ, ಗುಗ್ಗಳ ಮಹೋತ್ಸವ ಹಾಗೂ ಸ್ವಾಮಿಯ ರಥೋತ್ಸವವನ್ನು ವಿಧಿವತ್ತಾಗಿ ಕೈಗೊಳ್ಳಲಾಯಿತು.
ಸುಕ್ಷೇತ್ರ ಮಂತ್ರವಾಡಿಯ ಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಪ್ರವಚನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ದಿ: 31ರಂದು ಕಡುಬಿನ ಕಾಳಗ ಹಾಗೂ ಪಲ್ಲಕ್ಕಿ ಉತ್ಸವ ಜರುಗಲಿದೆ.
Comments
ನಾಗರಿಕ ಪತ್ರಕರ್ತ ಜಾತ್ರೆ ಸವಣೂರ ಹಾವೇರಿ ರಥೋತ್ಸವ ದೇವರು ಚಂದ್ರಶೇಖರ ಬಿ savanur district news jatre citizen reporter
Story first published: Wednesday, March 31, 2010, 14:40 [IST]