ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭಗತ್ ಉಗ್ರನೆಂದು ಬಿಂಬಿಸಿದ್ದು ಕಾಂಗ್ರೆಸ್!
ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಭಗತ್ ಸಿಂಗ್, ಸುಖ್ದೇವ್ ಹಾಗೂ ರಾಜಗುರು ಅವರನ್ನು 1931, ಮಾರ್ಚ್ 23ರಂದು ನೇಣಿಗೇರಿಸಲಾಗಿತ್ತು. ಆದರೆ ಭಗತ್, ಸುಖ್ ದೇವ್ ಹಾಗೂ ರಾಜಗುರು ಭಾರತೀಯರ ಅಭಿಮಾನದ ವೀರ ಪುತ್ರರಾಗಿಯೇ ಉಳಿದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಅವರು ಭಯೋತ್ಪಾದಕರಂತೆ ಕಾಣುತ್ತಿದ್ದಾರೆ ಎಂದು ಸಂಧು ಕಿಡಿಕಾರಿದರು.
ಗಾಂಧಿ, ನೆಹರು ಕುಟುಂಬವನ್ನು ವೈಭವೀಕರಿಸುವ ಸಲುವಾಗಿಯೇ ಕಾಂಗ್ರೆಸ್ ಮೊದಲಿನಿಂದಲು ಭಗತ್ ಸಿಂಗ್ ಒಬ್ಬ ಭಯೋತ್ಪಾದಕ ಎಂದೇ ಬಿಂಬಿಸುತ್ತಿದೆ ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಗತ್ ಸಿಂಗ್ ಬಾಂಬ್ ಎಸೆದಿದ್ದ, ಗುಂಡು ಹೊಡೆಯುತ್ತಿದ್ದ ಎಂಬುದಾಗಿ ಕಾಂಗ್ರೆಸ್ ಸಾರುತ್ತಲೇ ಬಂದಿದೆ. ಆದರೆ ಇದು ಸತ್ಯಾಂಶವಲ್ಲ, ಯಾಕೆಂದರೆ ನೆಹರು ಮತ್ತು ಗಾಂಧಿ ಕುಟುಂಬಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಗಲು ಕಾಂಗ್ರೆಸ್ ಹೂಡಿರುವ ಷಡ್ಯಂತ್ರ ಇದು ಎಂದು ಅವರು ಕಿಡಿಕಾರಿದ್ದಾರೆ.
Comments
Story first published: Thursday, March 25, 2010, 16:15 [IST]