ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ.ನಾಡು ಚುನಾವಣೆ, ಬೆಂಗಳೂರಿನಲ್ಲಿ ಪ್ರಚಾರ !!

By Mrutyunjaya Kalmat
|
Google Oneindia Kannada News

Jayalalitha
ಬೆಂಗಳೂರು, ಮಾ. 18 : ತಮಿಳುನಾಡಿನ ಅಸೆಂಬ್ಲಿ ಚುನಾವಣೆಗೂ ಬೆಂಗಳೂರಿನ ರಾಜಾಜಿನಗರಕ್ಕೂ ಒಂಥರಾ ಸಂಬಂಧ. ಧರ್ಮಪುರಿ ಜಿಲ್ಲೆಯ ಪೆನ್ನಾಗರಂ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಸಂದರ್ಭದಲ್ಲಿ ತಮಿಳುನಾಡು ನಾಯಕರು ರಾಜಾಜಿನಗರಕ್ಕೆ ಬಂದು ಮತದಾರರನ್ನು ಒಲೈಸುವುದಂದರೆ !!

ಹೌದು, ರಾಜಾಜಿನಗರದ ಕೊಳಚೆ (ಸ್ಲಂ) ಪ್ರದೇಶದಲ್ಲಿ ವಾಸಿಸುವ ಸುಮಾರು ಮೂವತ್ತು ಸಾವಿರ ತಮಿಳಿಗರು ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯವರು ಮತ್ತು ಅಧಿಕೃತವಾಗಿ ವೋಟರ್ ಲಿಸ್ಟ್ ನಲ್ಲಿ ತಮ್ಮ ಹೆಸರು ಹೊಂದಿರುವವರು. ಹಾಗಾಗಿ ಎಐಡಿಎಂಕೆ , ಡಿಎಂಕೆ, ಪಿಎಂಕೆ ಪಕ್ಷದ ರಾಜಕೀಯ ನಾಯಕರುಗಳು ಬುಧವಾರ ( ಮಾ 17 ) ಈ ಪ್ರದೇಶಕ್ಕೆ ಭೇಟಿ ನೀಡಿ ಮತದಾರರಿಗೆ ಮುಂಗಡವಾಗಿ ಬಸ್ ಟಿಕೆಟ್ ಮತ್ತು ದಿನದ ಖರ್ಚಿಗೆ ಬೇಕಾಗುವಷ್ಟು ಹಣ ನೀಡಿ ಹೋಗಿದ್ದರೆನ್ನುವ ಸುದ್ದಿ.

ಮತದಾನ ದಿನ ಬಂದು ಮತ ಚಲಾಯಿಸಿ ಮಿಕ್ಕ ದುಡ್ಡು ಎಣಿಸಿಕೊಂಡು ಹೋಗಿ ಎನ್ನುವ ಫರ್ಮಾನು ಕೂಡ ನೀಡಿದ್ದಾರೆನ್ನುವ ಸುದ್ದಿಯಿದೆ. ಮತದಾರರನ್ನು ಓಲೈಸುವುದರಲ್ಲಿ ಡಿಎಂಕೆ ಒಂದು ಹೆಜ್ಜೆ ಮುಂದಿದೆ. ಈ ಕ್ಷೇತ್ರದ ಮರುಚುನಾವಣೆ ಮಾರ್ಚ್ 28 ರಂದು ನಡೆಯಲಿದೆ. ಅಂದು ಬಿಬಿಎಂಪಿ ಚುನಾವಣಾ ಕೂಡ ನಡೆಯಲಿದೆ. ಈ ಕ್ಷೇತ್ರದ ಮತದಾರರು ಅಲ್ಲೂ ಇಲ್ಲೂ ಎರಡೂ ಕಡೆ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೋ ಚುನಾವಣಾ ಆಯೋಗ ಇದಕ್ಕೆ ಉತ್ತರ ನೀಡಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X