ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

22ಕ್ಕೆ ಮಹಾಲಿಂಗೇಶ್ವರನಿಗೆ ಬ್ರಹ್ಮರಥ ಸಮರ್ಪಣೆ

By Shami
|
Google Oneindia Kannada News

Muthappa Rai
ಪುತ್ತೂರು, ಮಾ. 18:ಪುರಾಣ ಪ್ರಸಿದ್ದ ಇಲ್ಲಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಮಾರ್ಚ್ 22 ರಂದು ಉದ್ಯಮಿ, ಮತ್ತು ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಎನ್ ಮುತ್ತಪ್ಪ ರೈ ಬ್ರಹ್ಮರಥ ಸಮರ್ಪಿಸಲಿದ್ದಾರೆ.

71 ಅಡಿ ಇರುವ ಮತ್ತು ರಾಜ್ಯದಲ್ಲೇ ಅತ್ಯಂತ ಎತ್ತರದ ಹೆಗ್ಗಳಿಕೆಯ ಈ ರಥವನ್ನು ಮುತ್ತಪ್ಪ ರೈ ಸುಮಾರು ಒಂದು ಕೋಟಿ ರುಪಾಯಿ ವೆಚ್ಚದಲ್ಲಿ ದೇವಸ್ಥಾನಕ್ಕೆ ಅರ್ಪಿಸುತ್ತಿದ್ದಾರೆ. ಸುಮಾರು 55 ಟನ್ ಭಾರವಿರುವ ಈ ರಥವನ್ನು ಉಡುಪಿ ಮತ್ತು ಕಾಸರಗೋಡಿನಿಂದ ಬಂದ 20 ಕುಶಲಕರ್ಮಿಗಳು ತೇಗದಮರದಿಂದ ಎರಡು ವರ್ಷದ ಅವಧಿಯಲ್ಲಿ ತಯಾರಿಸಿದ್ದಾರೆ.

ಮಾರ್ಚ್ 16 ರಿಂದ ಆರಂಭಗೊಂಡು ಒಂದು ವಾರ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವರಿಗೆ ಈ ರಥ ಸಮರ್ಪಣೆಯಾಗಲಿದೆ. ತುಳುನಾಡ ಪದ್ದತಿಯಂತೆ ಮಂಗಳೂರು, ಉಡುಪಿ, ಸಕಲೇಶಪುರ, ಹಾಸನ, ಕಾಸರಗೋಡು ಮತ್ತು ಮಡಿಕೇರಿಯಿಂದ ದೇವಾಲಯಕ್ಕೆ ಭಾರೀ ಪ್ರಮಾಣದ ಹೊರೆಕಾಣಿಕೆ ಹರಿದು ಬರುತ್ತಿದೆ. ಸುಮಾರು ನಾಲ್ಕು ಲಕ್ಷ ಜನರಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X