ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಂಗಳೂರು : ಛೋಟಾ ಶಕೀಲ್ ಸಹಚರರ ಬಂಧನ
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಪಶ್ಚಿಮ ವಲಯದ ಐಜಿಪಿ ಗೋಪಾಲ್ ಹೊಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿ ಸುಬ್ರಮಣ್ಯೇಶ್ವರ ರಾವ್, ಭೂಗತ ಪಾತಕಿ ರವಿ ಪೂಜಾರಿ ತಂಡದ ಸದಸ್ಯರ ಕೊಲೆಗೆ ಸಂಚು ರೂಪಿಸಿದ್ದ ಛೋಟಾ ಶಕೀಲ್ ಸಹಚರರು ಎನ್ನಲಾದ 11 ಮಂದಿಯನ್ನು ಬಂಧಿಸುವಲ್ಲಿ ಮಂಗಳೂರು ಅಪರಾಧಿ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೇ ಬಂಧಿತ ಆರೋಪಿಗಳು ನಗರದ ಉದ್ಯಮಿದಾರರಿಗೆ ಬೆದರಿಕೆ ಒಡ್ಡಿದ್ದರು ಎಂದು ಹೊಸೂರು ವಿವರಿಸಿದರು.
ಮಂಜುನಾಥ್ ಅಲಿಯಾಸ್ ಮಂಜ(22), ಸುಶೀಲ್ ಕುಮಾರ್ ಅಲಿಯಾಸ್ ಮೋನು(24), ಲತೀಸ್ ನಾಯ್ಕ್ ಅಲಿಯಾಸ್ ಲಸ್ಸಿ(21), ಅಶ್ವಿನ್ ಅಂಚನ್(25), ಸುರೇಶ್ ಅಲಿಬಾನ್ ಡಿಸೋಜಾ(38), ಲೋಹಿತ್ ಗಟ್ಟಿ(21), ಪ್ರವೀಣ್(30), ಸುಸಾನ್ ಚಂದ್ರ(22) ಬಂಧಿತ ಆರೋಪಿಗಳಾಗಿದ್ದಾರೆ.
Comments
Story first published: Wednesday, March 17, 2010, 16:22 [IST]