ಮಾಯಾವತಿಗೆ ಏನಾಗಿದೆ..?
ಮಾಯಾವತಿ ಉತ್ತರ ಪ್ರದೇಶ ಬಹುಜನ ಸಮಾಜ ಪಕ್ಷದ ನಾಯಕಿ ಹಾಗೂ ಪ್ರಸ್ತುತ ಆ ರಾಜ್ಯದ ಮುಖ್ಯಮಂತ್ರಿ. ಈಯಮ್ಮನ ಹುಚ್ಚಾಟಕ್ಕೆ ಅಲ್ಲಿನ ಜನರು ನಗಬೇಕೋ, ಅಳಬೇಕೋ ತಿಳಿಯದಾಗಿದೆ. ರಾಜ್ಯದ ಮುಖ್ಯಮಂತ್ರಿಯಂತಹ ಅತ್ಯಂತ ಪ್ರಭಾವಿ ಹುದ್ದೆಯಲ್ಲಿರುವ ಮಾಯಾವತಿ, ನೋಟಿನ ಹಾರವನ್ನು ಹಾಕಿಕೊಂಡು ಜನರತ್ತ ಕೈಬೀಸುವುದೇ ?
ನೋಟನ್ನು ಸರವಾಗಿಸಿಕೊಂಡು ಕೊರಳಲ್ಲಿ ಹಾಕಿಸಿಕೊಂಡು ಕುಣಿಯುದು, ಹಾಡುವುದು, ನೃತ್ಯ ಮಾಡುವುದು ಸಾಮಾನ್ಯ. ಪ್ರೇಕ್ಷಕರು ಖುಷಿಯಿಂದ ನೋಟಿನ ಹಾರ ಹಾಕಿ ಮಜಾ ಉಡಾಯಿಸುವುದು ಕಂಡು ಬರುವ ದೃಶ್ಯ. ಆದರೆ, ಇಂದಲ್ಲ, ನಾಳೆ ಭಾರತದ ಪ್ರಧಾನಮಂತ್ರಿಯಾಗುವೆ ಎಂದು ಬೀಗುವ ಮಾಯಾವತಿ ನೋಟಿನ ಹಾರ ಹಾಕಿಸಿಕೊಂಡು ಆತ್ಮರತಿ ಪ್ರದರ್ಶಿಸಿಸುವುದು ಸಹಿಸಲು ಸಾಧ್ಯವೇ ? ಇವರು ಭಾರತದ ಪ್ರಧಾನಿಯಾದರೆ ಗತಿ ಏನು ?
ಲಖನೌನಲ್ಲಿ ಬಿಎಸ್ ಪಿ ಕಾರ್ಯಕರ್ತರು ಏರ್ಪಡಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರಿಗೆ ಕಾರ್ಯಕರ್ತರು ಸುಮಾರು 18 ಲಕ್ಷ ರುಪಾಯಿಯ ನೋಟಿನ ಹಾರವನ್ನು ಹಾಕಿ ಕೇಕೆ ಹಾಕಿದ್ದಾರೆ. ಮಾಯಾವತಿ ಅವರ ಹುಚ್ಚಾಟಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪಿಸಿವೆ. ಲೋಕಸಭೆಯಲ್ಲೂ ಕೂಡಾ ಇದರ ಬಗ್ಗೆ ಚರ್ಚೆಯಾಗಿದೆ.