ಫುಟ್ ಬಾಲ್ ಆಟಗಾರ ನೇಣಿಗೆ!
ಜೀವನಹಳ್ಳಿ ಐಟಿಸಿ ಕಾಲನಿ ನಿವಾಸಿ ರಾಜನ್ಮೂರ್ತಿ (35) ಮೃತರು. ಬಾಣಸವಾಡಿ ಬಿಎಸ್ಎನ್ಎಲ್ ಕಚೇರಿಯಲ್ಲಿ ಲೆಕ್ಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಮೃತರು ಅವಿವಾಹಿತರು. ಇವರ ತಂದೆ, ತಾಯಿ ಈ ಹಿಂದೆಯೇ ನಿಧನರಾಗಿದ್ದರು. ರಾಜನ್ಮೂರ್ತಿ ಅವರಿಗೆ ಏಳು ಮಂದಿ ಸಹೋದರಿಯರಿದ್ದು, ಮೂವರಿಗೆ ಮದುವೆಯಾಗಿದ್ದು, ಉಳಿದವರಿಗೆ ವಿವಾಹ ಆಗಿರಲಿಲ್ಲ.
ಒಂದು ವಾರದಿಂದ ಕೆಲಸಕ್ಕೆ ಹೋಗದೆ ಅವರು ಮನೆಯಲ್ಲೇ ಇದ್ದರು. ಬುಧವಾರ ರಾತ್ರಿ 10.30ರ ಸುಮಾರಿಗೆ ಊಟ ಮಾಡಿ ಮಲಗಿದರು. ಗುರುವಾರ ಬೆಳಗಿನಜಾವ 1.30ರ ಸುಮಾರಿಗೆ ರಾಜನ್ಮೂರ್ತಿ ಅವರ ಸಹೋದರಿ ಕೌಸಲ್ಯ ಎಂಬುವರು ನೋಡಿದಾಗ ಹಾಸಿಗೆ ಮೇಲೆ ಸಹೋದರ ಇರಲಿಲ್ಲ. ಗಾಬರಿಗೊಂಡು ಮನೆಯಲ್ಲಿ ಹುಡುಕಿದಾಗ ರಾಜನ್ಮೂರ್ತಿ ನೇಣಿಗೆ ಶರಣಾಗಿದ್ದರು.
ತಕ್ಷಣ ನೆರೆ-ಹೊರೆಯವರು ಪುಲಕೇಶಿ ನಗರ ಠಾಣೆಗೆ ವಿಷಯ ತಿಳಿಸಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತರು ಯಾವುದೇ ಪತ್ರ ಬರೆದಿಲ್ಲ. ಹೀಗಾಗಿ, ಆವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕೆಲ ದಿನಗಳಿಂದ ಖಿನ್ನರಾಗಿದ್ದು. ಜೀವನದಲ್ಲಿ ಜುಗುಪ್ಸೆಗೊಂಡು ಅವರು ಈ ಕೃತ್ಯ ಎಸಗಿಕೊಂಡಿರಬಹುದು ಎಂದು ಶಂಕಿಸಲಾಗಿದೆ.