ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯರಿಂದ ನಿಸ್ವಾರ್ಥ ಸೇವೆ ಅಗತ್ಯ: ರಾಚಂಗೌಡ

By Mrutyunjaya Kalmat
|
Google Oneindia Kannada News

Ramachandregowda
ಬೆಂಗಳೂರು, ಮಾ. 11 : ಹೋಮಿಯೋಪತಿ ವೈದ್ಯಕೀಯ ಪದ್ದತಿಯಲ್ಲಿ ವೈದ್ಯರು ಪವಾಡವನ್ನು ಸೃಷ್ಠಿಸಬಲ್ಲರು. ಈ ಪದ್ದತಿ ಬೇರಾವುದೇ ವೈದ್ಯಕೀಯ ಪದ್ದತಿಗೆ ಕಡಿಮೆಯಿಲ್ಲ. ರೋಗಿಗಳನ್ನು ಗುಣಪಡಿಸಲು ವೈದ್ಯರಿಗೆ ಆರನೇ ಕಣ್ಣಿರಬೇಕು. ನುರಿತ ವೈದ್ಯನಾಗಲು ಅನುಭವ ಮುಖ್ಯ. ನಿವೇಲ್ಲರೂ ವೈದ್ಯರಾಗಿ ಒಳ್ಳೆಯ ಹೆಸರು ಮಾಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇಗೌಡ ಎಂದು ಕರೆ ನೀಡಿದರು.

ಪುರಭವನದಲ್ಲಿ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ತೆ ಹಮ್ಮಿಕೊಂಡಿದ್ದ ಪದವಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಹೋಮಿಯೋಪತಿಯು ನ್ಯಾನೋ ತಂತ್ರಜ್ಞಾನ ಇದ್ದಂತೆ ಬರೀ ಪ್ರಶ್ನೆಗಳ ಮೂಲಕ ನಾವು ಸಮಸ್ಯೆಗಳನ್ನು ತಿಳಿದುಕೊಳ್ಳುತ್ತೇವೆ. ಆಲೋಪತಿಗೆ ಹೋಲಿಸಿದರೆ ಇದರ ಚಿಕಿತ್ಸಾ ಹಾಗೂ ಔಷಧಿ ವೆಚ್ಚವು ಸಹ ಬಹಳ ಕಡಿಮೆ. ಈಗ ಉತ್ಸಾಹದಿಂದ ಪದವಿ ಪಡೆದು ಹೊರಹೊಮ್ಮುತ್ತಿರುವ ಯುವ ವೈದ್ಯರು ಕನಿಷ್ಟ ಎರಡು ವರ್ಷಗಳ ಕಾಲವಾದರೂ ಹಳ್ಳಿಗಳಲ್ಲಿ ಕೆಲಸ ಮಾಡಬೇಕೆಂದು ಅವರು ಕಿವಿಮಾತು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X