ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೊಲ್ಲೂರು ರಥದ ಚಕ್ರಕ್ಕೆ ಭಕ್ತನ ಬಲಿ
ಮೃತ ವ್ಯಕ್ತಿಯನ್ನು ಕೇರಳದ ವಡಗರದ ಎಂ ವಿ ಬಾಬು(48) ಎಂದು ಗುರುತಿಸಲಾಗಿದೆ. ಕಣ್ಣೂರು ನಿವಾಸಿ ಹರಿದಾಸ ಎಂಬುವರು ಗಾಯಗೊಂಡಿದ್ದು ಅವರನ್ನು ಕುಂದಾಪುರದ ಚಿನ್ಮಯ ಆಸ್ಪತ್ರೆಗೆ ಸೇರಿಸಲಾಗಿದೆ.ಈ ಘಟನೆ ಬಗ್ಗೆ ತನಿಖೆ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಶ್ವನಾಥ್ ಪಂಡಿತ್ ಹೇಳಿದರು.
ರಥ ಎಳೆಯಲು ಆರಂಭಿಸಿದ ಸಂದರ್ಭದಲ್ಲಿ ರಥದ ಚಕ್ರ ಅಕಸ್ಮಾತ್ ತಿರುಗಿದಾಗ,ಗಾಬರಿಗೊಂಡ ಭಕ್ತ ಸಮೂಹ ನಡೆಸಿದ ತಳ್ಳಾಟದಲ್ಲಿ ಕೆಳಗೆ ಬಿದ್ದ ಬಾಬು ಹಾಗೂ ಹರಿದಾಸ ಅವರು ರಥದ ಚಕ್ರಕ್ಕೆ ಸಿಕ್ಕಿ ಹಾಕಿಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕೊಲ್ಲೂರು ಶ್ರೀಮೂಕಾಂಬಿಕಾ ರಥೋತ್ಸವಕ್ಕಾಗಿ ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸುತ್ತಾರೆ.
Comments
ಉಡುಪಿ ಹಿಂದೂ ಕೊಲ್ಲೂರು ಸಾವು ರಥೋತ್ಸವ ಕುಂದಾಪುರ ಕೇರಳ kundapur udupi rathothsav death hindu devotees kerala
Story first published: Wednesday, March 10, 2010, 12:29 [IST]