ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಪಿ ವಿವಿ ಭೂ ಪರಭಾರೆಗೆ ಕಸಾಪ ವಿರೋಧ

By Mahesh
|
Google Oneindia Kannada News

Dr. Nallur Prasad
ಹಾಸನ, ಮಾ. 8: ಹಂಪಿ ವಿಶ್ವವಿದ್ಯಾಲಯಕ್ಕೆ ಸೇರಿದ 80 ಎಕರೆ ಜಮೀನನ್ನು ವಿಜಯನಗರ ಪುನಃಶ್ಚೇತನ ಪ್ರತಿಷ್ಠಾನ ಟ್ರಸ್ಟ್ ಗೆ ವಹಿಸುವ ರಾಜ್ಯ ಸರಕಾರದ ಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಾ. ನಲ್ಲೂರ್ ಪ್ರಸಾದ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಹಂಪಿ ಕನ್ನಡ ವಿವಿಯ ಭೂಮಿ ಪರಭಾರೆ ಎಂದಿಗೂ ಸಾಧ್ಯವಿಲ್ಲ. ವಿವಿಯ ಒಂದಿಂಚೂ ಭೂಮಿಯನ್ನು ಬಿಡೆವು ಎಂದು ಹಾಸನದಲ್ಲಿ ಇಂದು ನಲ್ಲೂರ್ ಪ್ರಸಾದ್ ಹೇಳಿದರು. ಭೂ ಪ್ರದೇಶ ಪರಭಾರೆ ವಿರೋಧಿಸಿ ಇತ್ತೀಚೆಗೆ ಹಂಪಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ ರಹಮತ್ ತರೀಕೆರೆ ಡೀನಶೀಪ್ ಗೆ ರಾಜೀನಾಮೆ ನೀಡಿದ್ದರು.ಬೆಂಗಳೂರಿನಲ್ಲಿ ಕೂಡ ಸರಕಾರದ ಕ್ರಮವನ್ನು ಮಾಜಿ ಶಾಸಕರ ವೇದಿಕೆ ತೀವ್ರವಾಗಿ ಖಂಡಿಸಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X