ಯುಪಿಎಗೆ ಲಾಲೂ, ಮುಲಾಯಂ ಬೆಂಬಲ ವಾಪಸ್
ಈ ನಡುವೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಕರೆದಿದ್ದ ಸರ್ವಪಕ್ಷಗಳ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ. ವಿಧೇಯಕ ಮಂಡನೆ ನಂತರದ ಬೆಳವಣಿಗೆಯ ಬಗ್ಗೆ ಚರ್ಚಿಸಲು ಪ್ರಣಬ್ ಮುಖರ್ಜಿ ಅವರು ಪ್ರಧಾನಿ ನಿವಾಸಕ್ಕೆ ತೆರಳಿದ್ದಾರೆ. ಇಂದು ಗದ್ದಲದ ನಡುವೆ ಮಹಿಳಾ ಮೀಸಲಾತಿ ವಿಧೇಯಕ ಮಂಡನೆ ಮಾಡಲಾಗಿತ್ತು ಹಾಗೂ ವಿಧೇಯಕದ ಮತಯಾಚನೆ ಇಂದು ಸಂಜೆ 6 ಗಂಟೆಗೆ ಎಂದು ನಿಗದಿಯಾಗಿತ್ತು. ಆದರೆ, ಮತಯಾಚನೆಗೂ ಮುನ್ನ ವಿಧೇಯಕ ಕುರಿತು ಚರ್ಚೆ ನಡೆಸುವ ಅಗತ್ಯವಿದೆ ಎಂದು ಬಿಜೆಪಿ ಪಟ್ಟು ಹಿಡಿದಿರುವ ಕಾರಣ, ಮತಯಾಚನೆಯನ್ನು ಮಂಗಳವಾರದವರೆಗೂ ಮುಂದೂಡಲಾಗಿದೆ.
ವಿಡಿಯೋ: ಲಾಲೂ, ಮುಲಾಯಂ ಮೀಸಲಾತಿ ನಾಟಕ
ಯುಪಿಎ ಸರ್ಕಾರಕ್ಕೆ ಬೆಂಬಲ ವಾಪಾಸ್ ಪಡೆದ ಲಾಲೂ, ಮುಲಾಯಂ ಅವರ ನಿರ್ಧಾರದಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಾಗದು. ಲೋಕಸಭೆಯಲ್ಲಿ ಎಸ್ಪಿ ಸಂಸದರ ಸಂಖ್ಯೆ 21, ಆರ್ ಜೆಡಿ ಸಂಸದರ ಸಂಖ್ಯೆ 4. ಅಲ್ಲದೆ, ಇವೆರಡೂ ಪಕ್ಷಗಳು ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದವು. ಇಂದು ಸದನದಲ್ಲಿ ನಡೆದ ಗದ್ದಲವನ್ನು ಎಡಪಕ್ಷಗಳು ಹಾಗೂ ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಯುಪಿಎ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ.