ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪತ್ರಿಕೆ ಮೇಲಿನ ದಾಳಿಗೆ ಅನಿವಾಸಿಗಳ ಖಂಡನೆ
ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಬುರ್ಖಾ ಮತ್ತು ಮುಸ್ಲಿಂ ಸಮಾಜವನ್ನು ಅವಹೇಳಿಸುವ ಲೇಖನದ ವಿರುದ್ಧ ಆರೋಗ್ಯಪೂರ್ಣ ಚರ್ಚೆ ನಡೆಸಿ ಪರಿಹಾರ ಕಂಡು ಕೊಳ್ಳುವ ಬದಲು ಕಾನೂನನ್ನು ಕೈಗೆತ್ತಿ ಪ್ರತಿಭಟಿಸುವುದು ಸರಿಯಲ್ಲ ಎಂದು ಹೇಳಿದೆ.
ಈ ಲೇಖನದ ಬಗ್ಗೆ ಈಗಾಗಲೇ ಕನ್ನಡಪ್ರಭ ಪತ್ರಿಕೆಯ ಸಂಪಾದಕರು ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ಹೀಗಿದ್ದೂ ಶಾಂತಿಯನ್ನು ಕೆಡಿಸುವ ಉದ್ದೇಶದಿಂದ ಮತ್ತೆ ಈ ದಾಳಿ ನಡೆದಿದೆ. ಈ ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ಪತ್ರಕರ್ತರಿಗೆ ಹಾಗೂ ಪತ್ರಿಕಾ ಕಚೇರಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘದ ಸಂಚಾಲಕ ಅಶ್ರಫ್ ಮಂಜ್ರಾಬಾದ್ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
Comments
ಕೋಮುಗಲಭೆ ಕನ್ನಡಪ್ರಭ ಮಂಗಳೂರು ರಿಯಾದ್ ಪತ್ರಕರ್ತ ಮುಸ್ಲಿಂ ಅಶ್ರಫ್ ಮಂಜ್ರಾಬಾದ್ communal riot mangaluru kannadaprabha muslim
Story first published: Friday, March 5, 2010, 12:13 [IST]