ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪಂಗಿ ಕ್ಲೀನ್ ಚಿಟ್ ಗೆ ಹೆಗ್ಡೆ ಆಕ್ಷೇಪ

By Mrutyunjaya Kalmat
|
Google Oneindia Kannada News

N Santhosh Hegde
ಬೆಂಗಳೂರು, ಮಾ. 3 : ಕೊಟ್ಟವನು ಕೋಡಂಗಿ, ಇಸ್ಕೊಂಡವನು ಸಂಪಂಗಿ, ಸದನ ಸಮಿತಿ ವರದಿ ಬಗ್ಗೆ ಲೋಕಾಯುಕ್ತ ಸಂತೋಷ ಹೆಗ್ಡೆ ನೀಡಿದ ಪ್ರತಿಕ್ರಿಯೆ. ಸಾಮಾಜಿಕ ಬದಲಾವಣೆಯಲ್ಲಿ ಪತ್ರಿಕೆಗಳ ಪಾತ್ರ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ನ್ಯಾಯಮೂರ್ತಿ ಹೆಗ್ಡೆ ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡುವುದಕ್ಕೆ ಮುನ್ನ ವೇದಿಕೆಯಲ್ಲಿದ್ದ ಗಣ್ಯರೊಬ್ಬರು ಕೋಡಂಗಿ ಎಂಬ ಪದ ಬಳಸಿದರು. ಸಂಪಂಗಿ ಪ್ರಕರಣದಲ್ಲಿ ಚಾಟಿ ಏಟು ಬೀಸಲು ಲೋಕಾಯುಕ್ತರಿಗೆ ಇಷ್ಟೇ ಸಾಕಾಯ್ತು. ಅವರು ಇಡೀ ಕಥಾ ಭಾಗವನ್ನು ಕೊಟ್ಟವ ಕೋಡಂಗಿ, ಇಸ್ಕೊಂಡವ ಸಂಪಂಗಿ ಎಂದು ಒಂದೇ ವಾಕ್ಯದಲ್ಲಿ ವ್ಯಾಖ್ಯಾನಿಸಿದರು.

ಸಂಪಂಗಿಯನ್ನು ಶಾಸಕರ ಭವನದಲ್ಲಿ ಬಂಧಿಸಿದ್ದು ಹಕ್ಕು ಚ್ಯುತಿಯಾಗುವುದಿಲ್ಲ. ಏಕೆಂದರೆ ಅದಕ್ಕೂ ಸದನದ ಕಲಾಪಕ್ಕೂ ಸಂಬಂಧವಿಲ್ಲ, ಜೊತೆಗೆ ವಿಚಾರಣೆಗೆ ಹಾಜರಾಗಿಲ್ಲ ಎಂಬ ಕಾರಣ ನೀಡಿ ಫಾರೂಕ್ ಗೆ ವಾಗ್ದಂಡನೆ ವಿಧಿಸುವಂತೆ ಸೂಚಿಸಲಾಗಿದೆ. ಇದರಲ್ಲಿಯೂ ಅರ್ಥವಿಲ್ಲ. ಏಕೆಂದರೆ ಆತನಿಗೆ ಸಮಿತಿ ವಿಚಾರಣೆ ಮೇಲೆ ವಿಶ್ವಾಸವಿಲ್ಲದೇ ಇರಬಹುದು. ಹೀಗಾಗಿ ಸಮಿತಿಯ ವರದಿಗೆ ಯಾವುದೇ ಬೆಲೆ ಇಲ್ಲ ಎಂದು ಹೆಗ್ಡೆ ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X