ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುಚೋದ್ಯದ ಲೇಖನ: ಚಿದಂಬರಂ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಈ ಘಟನೆಯು ತಸ್ಲೀಮಾ ಅವರ ವೀಸಾ ಅವಧಿ ವಿಸ್ತರಣೆಗೆ ಅಡ್ಡಿಯುಂಟು ಮಾಡುವುದಿಲ್ಲ ಎಂದರು. ಕರ್ನಾಟಕದಲ್ಲಿ ಕನ್ನಡ ಪತ್ರಿಕೆಯೊಂದು ತಸ್ಲೀಮಾ ಅವರು ಬರೆದಿದ್ದಾರೆಂಬ ಲೇಖನದ ಕನ್ನನಪವಾದವೇ ಸರಿಯಿಲ್ಲ. ಇದು ದುರದೃಷ್ಟಕರ ಮತ್ತು ಕುಚೋದ್ಯದಿಂದ ಕೂಡಿದೆ ಎಂದು ಹೇಳಿದ್ದಾರೆ.
ಈ ಲೇಖನದಿಂದಾಗಿ ಉದ್ರಿಕ್ತಗೊಂಡ ಒಂದು ಸಮುದಾಯದ ಜನರು ಹಿಂಸಾಚಾರಕ್ಕಿಳಿದ ಹಿನ್ನೆಲೆಯನ್ನು ತಹಬದಿಗೆ ತರುವುದಕ್ಕಾಗಿ ಕರ್ನಾಟಕಕ್ಕೆ ಅರೆಸೇನಾಪಡೆಯನ್ನು ಕಳುಹಿಸಿ ಕೊಟ್ಟಿದ್ದೇವೆ ಎಂದು ಚಿದಂಬರಂ ವಿವರಿಸಿದರು. ಸೋಮವಾರ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಮಾತನಾಡಿದ್ದು, ಗಲಭೆಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ನಡೆಸುತ್ತಿರುವ ಪ್ರಯತ್ನಕ್ಕೆ ಕೈಜೋಡಿಸುವುದಾಗಿ ಅವರು ಹೇಳಿದರು. ಕರ್ನಾಟಕದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ರಾಜ್ಯಪಾಲರು ಮುಸ್ಲಿಂ ಮುಖಂಡರಸಭೆ ಕರೆದು ಮಾತುಕತೆ ನಡೆಸಿದ್ದಾರೆ ಎಂದು ಅವರು ತಿಳಿಸಿದರು.
Comments
ಪಿ ಚಿದಂಬರಂ ತಸ್ಲೀಮಾ ನಸ್ರೀನ್ ಕೋಮುಗಲಭೆ ಯಡಿಯೂರಪ್ಪ ಶಿವಮೂಗ್ಗ ಹಾಸನ p chidambaram taslima nasreen communal riots karnataka yediyurappa hassan
Story first published: Wednesday, March 3, 2010, 10:29 [IST]