ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೈತರಿಗೆ ಬಿಡಿಗಾಸು, ಬಿಡಿಎಗೆ ಇಡಿಗಾಸು
ಬೆಂಗಳೂರಿನ ಸುತ್ತಲೂ ಬಿಡಿಎ ಬಡಾವಣೆಗಳು ನಾಯಿಕೊಡೆಗಳಂತೆ ಹುಟ್ಟುಕೊಳ್ಳುತ್ತಿವೆ. ಈಗಾಗಲೇ ಕೆಂಪೇಗೌಡ ಬಡಾವಣೆ, ಅರ್ಕಾವತಿ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆಗಳನ್ನು ಜನತೆ ವಿರೋಧಿಸುತ್ತಿದ್ದಾರೆ, ಆದರೆ ಸರ್ಕಾರದ ಕಿವಿ ಮುಚ್ಚಿದೆಯೇ? ರೈತರಿಂದ ಪಡೆದ ಭೂಮಿಗೆ ಬಿಡಿಎ ಮಾರುಕಟ್ಟೆ ಬೆಲೆಯನ್ನಾದರೂ ನೀಡುತ್ತಿಲ್ಲ. ಇದರಲ್ಲಿ ರಿಯಲ್ ಎಸ್ಟೇಟ್ಗಳ ಕರಾಮತ್ತು ಬೇರೆ. ಈ ಹಾವಳಿಯಲ್ಲಿ ನವನಾಗರೀಕತೆ ನಿರ್ಮಾಣ ಕನಸಷ್ಟೆ.
ಬೆಂಗಳೂರಿಗೆ ಮಾರು ಹೋಗಿರುವುದು ಬರೀ ಕರ್ನಾಟಕದವರು ಮಾತ್ರವಲ್ಲ, ಉತ್ತರ ಭಾರತದಿಂದಲೂ ಜನ ವಲಸೆ ಬರುತ್ತಿರುವುದನ್ನು ಕಾಣಬಹುದಾಗಿದೆ. ಈ ಬಡಾವಣೆಗಳ ನಿರ್ಮಾಣದಿಂದ ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚುತ್ತದೆಯೇ ಹೊರತು ಅಭಿವೃದ್ಧಿಯಾಗದು. ಸಮಸ್ಯೆಗಳ ಸರಮಾಲೆಯೇ ಎದುರಾಗುತ್ತದೆ, ಮೂಲಭೂತವಾಗಿ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ಹೀಗಾಗಿ ಸರ್ಕಾರ ರೈತರನ್ನು ಕಾಡುವ ಬದಲು ದೂರಾಲೋಚನೆಯಿಂದ ಹೆಜ್ಜೆ ಇಡುವುದು ಅಗತ್ಯವಾಗಿದೆ.
Comments
ರಿಯಲ್ ಎಸ್ಟೇಟ್ ಬಿಡಿಎ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅರ್ಕಾವತಿ ಬೆಂಗಳೂರು ಮೂಲಭೂತ ಸೌಕರ್ಯ ಕುಣಿಗಲ್ real estate bda bengaluru development authority bangalore kunigal
Story first published: Wednesday, March 3, 2010, 11:46 [IST]